Advertisement

ಲೀಟರ್‌ ಗೋಮೂತ್ರಕ್ಕೆ 4 ರೂ! ಛತ್ತೀಸ್‌ಗಡ ಸರ್ಕಾರದಿಂದ ವಿನೂತನ ಯೋಜನೆ

07:48 PM Jul 30, 2022 | Team Udayavani |

ರಾಯ್ಪುರ: ಇಲ್ಲಿ ಗೋಮೂತ್ರವನ್ನು ನೀವು ಸರ್ಕಾರಕ್ಕೇ ಮಾರಾಟ ಮಾಡಬಹುದು. ಲೀಟರ್‌ಗೆ 4 ರೂ. ಕೊಟ್ಟು ಸರ್ಕಾರವೇ ಅದನ್ನು ಖರೀದಿಸುತ್ತದೆ!

Advertisement

ಹೌದು, ಗೋಮೂತ್ರವನ್ನು ಖರೀದಿಸುತ್ತಿರುವ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಛತ್ತೀಸ್‌ಗಡದ ಕಾಂಗ್ರೆಸ್‌ ಸರ್ಕಾರ ಪಾತ್ರವಾಗಿದೆ. ಹರೇಲಿ ತಿಹಾರ್‌ ಎಂಬ ಸ್ಥಳೀಯ ಹಬ್ಬದಂದೇ ಇಂಥದ್ದೊಂದು ಯೋಜನೆಗೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಚಾಲನೆ ನೀಡಿದ್ದಾರೆ.

ಯೋಜನೆಗೆ ಚಾಲನೆ ನೀಡುವುದರ ಜೊತೆಗೆ ಸಿಎಂ ಬಘೇಲ್‌ ಅವರು 5 ಲೀಟರ್‌ ಗೋಮೂತ್ರವನ್ನು ನಿಧಿ ಸ್ವಸಹಾಯ ಸಂಘಕ್ಕೆ ಮಾರಾಟ ಮಾಡಿ 5 ರೂ. ಪಡೆದಿದ್ದಾರೆ. ನಂತರ ಈ ಮೊತ್ತವನ್ನು ಸಿಎಂ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಂಕೇತಿಕವಾಗಿ ವರ್ಗಾಯಿಸಲಾಗಿದೆ.

ಗೋಮೂತ್ರಕ್ಕೂ ಮುನ್ನ, ಗ್ರಾಮೀಣ ಭಾಗದ ಜನರು ಮತ್ತು ರೈತರಿಂದ ಗೋವಿನ ಸಗಣಿಯನ್ನು ಖರೀದಿಸುವಂಥ “ಗೋಧನ ನ್ಯಾಯ ಯೋಜನೆ’ಯನ್ನೂ ಸರ್ಕಾರ ಆರಂಭಿಸಿತ್ತು. ಅದರಂತೆ, ಕೆಜಿಗೆ 2 ರೂ.ಗಳಂತೆ ಸಮಾಜದ ಎಲ್ಲ ವರ್ಗದ ಜನರೂ ಸಗಣಿಯನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ ಸರ್ಕಾರವು ಬರೋಬ್ಬರಿ 300 ಕೋಟಿ ರೂ.ಗೂ ಅಧಿಕ ಮೊತ್ತದ ಸಗಣಿಯನ್ನು ಸಂಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next