Advertisement

ಸಿಪಿಸಿಸಿ ಹುದ್ದೆ ಹಸ್ತಾಂತರದ ವೇಳೆ ಕಣ್ಣೀರಿಟ್ಟ ಛತ್ತೀಸ್‌ಗಡ ಸಿಎಂ

09:33 AM Jul 01, 2019 | Vishnu Das |

ರಾಯಪುರ್‌ : ಛತ್ತೀಸ್‌ಗಡ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಕಾರ್ಯಕರ್ತರ ತ್ಯಾಗ ನೆನೆದು  ಕಣ್ಣೀರಿಟ್ಟ ಘಟನೆ ಶನಿವಾರ ನಡೆದಿದೆ.

Advertisement

ಹಾಲಿ ಅಧ್ಯಕ್ಷರಾಗಿದ್ದ ಅವರು ಮೋಹನ್‌ ಮಾರ್ಕಮ್‌ ಅವರಿಗೆ ಅಧಿಕಾರ ಹಸ್ತಾಂತರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ಭಾವುಕರಾಗಿದ್ದಾರೆ.

ಪಕ್ಷದಸಂಘಟನೆಗಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ ಬಘೇಲ್‌ , 2013 ರಲ್ಲಿ ನಾವು ಸೋತ ಬಳಿಕ ರಾಹುಲ್‌ ಗಾಂಧಿ ನನಗೆ ಪಕ್ಷದ ಅಧ್ಯಕ್ಷ ಹುದ್ದೆ ನೀಡಿದರು. 2014 ರ ಲೋಕಸಭಾ ಚುನಾವಣೆಯಲ್ಲೂ ಸೋಲಾಯಿತು. ಆದರೆ ನಮ್ಮ ಕಾರ್ಯಕರ್ತರ ಹೋರಾಟದ ಫ‌ಲವಾಗಿ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಘೇಲ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿಕವೂ ಅವರು ಸಿಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next