Advertisement

ಗೋಮಾಂಸ, ಮೂಳೆ ಮಾರುತ್ತಿದ್ದ ಬಿಜೆಪಿ ಮುಖಂಡ!

10:19 AM Aug 27, 2017 | |

ರಾಯ್‌ಪುರ: ತಾನು ನಡೆಸುತ್ತಿದ್ದ ಗೋಶಾಲೆಗಳಲ್ಲಿ ಸುಮಾರು 300 ಹಸುಗಳು ಸಾವಿಗೀಡಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಛತ್ತೀಸ್‌ಗಢದ ಬಿಜೆಪಿ ಮುಖಂಡ ಹರೀಶ್‌ ವರ್ಮಾ, ಕೊಂದ ಹಸುಗಳ ಮಾಂಸ, ಚರ್ಮ ಹಾಗೂ ಮೂಳೆಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 

Advertisement

ಗೋಶಾಲೆಗಳನ್ನು ನಡೆಸುತ್ತಿದ್ದ ವರ್ಮಾ ಗೋಹತ್ಯೆ ಮಾಡುತ್ತಿರುವ ಕುರಿತು ಛತ್ತೀಸ್‌ಗಢದ ಗೋ ಸೇವಾ ಆಯೋಗ ಸ್ಥಳೀಯ ಪೊಲೀಸರಿಗೆ ದೂರು ನೀಡಿತ್ತು. ಅದರಂತೆ ಆ.18 ರಂದು ಆತನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿ ದಾಗ, ಗೋಮಾಂಸ, ಚರ್ಮ, ಮೂಳೆ ಮಾರುತ್ತಿದ್ದ  ವಿಷಯ ಬಯಲಾಗಿದೆ. ವರ್ಮಾನನ್ನು ಬಂಧಿಸಿದ ದಿನವೇ ಆತನನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next