Advertisement

ಛತ್ತೀಸ್‌ಗಢ: 15 ನಕ್ಸಲರು ಹತ

06:00 AM Aug 07, 2018 | Team Udayavani |

ರಾಯ್‌ಪುರ: ಛತ್ತೀಸ್‌ಗಢದ ಗ್ರಾಮವೊಂದರಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಸೋಮವಾರ ನಡೆದ ಭಾರೀ ಪ್ರಮಾಣದ ಗುಂಡಿನ ಚಕಮಕಿಯಲ್ಲಿ 15 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಛತ್ತೀಸ್‌ಗಢದ ಇತಿಹಾಸದಲ್ಲೇ ಅತೀ ದೊಡ್ಡ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಇದಾಗಿದ್ದು, ಒಂದೇ ಘಟನೆಯಲ್ಲಿ 15 ಮಂದಿ ಮಾವೋವಾದಿಗಳನ್ನು ಹೊಡೆದುರುಳಿಸಿದ್ದು ಇದೇ ಮೊದಲು ಎಂದು ರಾಜ್ಯದ ವಿಶೇಷ ಪೊಲೀಸ್‌ ಮಹಾನಿರ್ದೇಶಕ(ನಕ್ಸಲ್‌ ನಿಗ್ರಹ ಕಾರ್ಯಾಚರಣೆ) ಡಿ.ಎಂ. ಅವಸ್ಥಿ ತಿಳಿಸಿದ್ದಾರೆ. 

Advertisement

ಕೆಲವು ತಿಂಗಳ ಹಿಂದಷ್ಟೇ ನಕ್ಸಲ್‌ ದಾಳಿಯಿಂದಾಗಿ ಯೋಧರು ಹುತಾತ್ಮರಾಗಿ ದ್ದರು. ಸೋಮವಾರ ಸುಕ್ಮಾದ ಗೊಲ್ಲಪಳ್ಳಿ ಹಾಗೂ ಕೊಂಟಾ ನಡುವಿನ ಬುಡಕಟ್ಟು ಕುಟುಂಬಗಳೇ ಇರುವ ಗ್ರಾಮದಲ್ಲಿ ಬೆಳಗ್ಗಿನ ಜಾವ ನಕ್ಸಲರು ಭದ್ರತಾ ಪಡೆ ಯೋಧರ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಯೋಧರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಕ್ಸಲರ ತಂಡವೊಂದು ನೆಲೆಯೂರಿದ್ದಾಗಿ ಗುಪ್ತಚರ ಇಲಾಖೆ ಮೂಲಗಳು ಮೊದಲೇ ತಿಳಿಸಿದ್ದರಿಂದ ಭದ್ರತಾ ಪಡೆ ಅಲರ್ಟ್‌ ಆಗಿತ್ತು. ಹೀಗಾಗಿ ನಕ್ಸಲರ ದಾಳಿ ಎದುರಿಸಲು ಸಾಧ್ಯವಾಗಿದೆ ಎಂದು ಐಜಿಪಿ ವಿವೇಕಾನಂದ ಸಿನ್ಹಾ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next