Advertisement

ತುಳು ಕನ್ನಡಿಗರಿಗೆ ಛತ್ರಪತಿ ಶಿವಾಜಿ ಮಹಾರಾಜ್‌ ಸಾಧನಾ ಪುರಸ್ಕಾರ

12:33 PM Feb 27, 2018 | Team Udayavani |

ಮುಂಬಯಿ:  ದ ಪೀಪಲ್ಸ್‌ ಆರ್ಟ್‌ ಸೆಂಟರ್‌  ಮುಂಬಯಿ ಆರನೇ “ಛತ್ರಪತಿ ಶಿವಾಜಿ ಮಹಾರಾಜ್‌ ಸಾಧನಾ ಪುರಸ್ಕಾರ-2018′ ಪ್ರದಾನ ಸಮಾರಂಭವು ಫೆ. 25 ರಂದು  ಸಂಜೆ ಅಂಧೇರಿ ಪೂರ್ವದ ಹೊಟೇಲ್‌ ಕೊಹಿನೂರು ಕಾಂಟಿನೆಂಟಲ್‌ನ ಸಭಾಗೃಹದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮರಾಠಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್‌ ದತ್ತಾ, ಗೌರವ ಅತಿಥಿಗಳಾಗಿ  ಡಾ| ಸಂದೇಶ್‌ ಎಂ. ವಾಘ… ಉಪಸ್ಥಿತರಿದ್ದರು.

Advertisement

ಬಾಲಿವುಡ್‌ನ‌ ಹೆಸರಾಂತ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿಯ ಸದಸ್ಯರುಗಳಾದ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಒಕ್ಕಲಿಗ ಸಮುದಾಯ ಮುಂಬಯಿ ಇದರ ಜಯಲಕ್ಷಿ¾à ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ರಂಗಪ್ಪ ಸಿ. ಗೌಡ ಹಾಗೂ ಉದ್ಯಮಿಗಳಾದ ಸಾಬು ಡೇನಿಯಲ್‌,  ಕೆ. ಶ್ರೀನಿವಾಸನ್‌,  ವೇಣು ಪಿ. ನಾಯರ್‌,  ಎಂ. ಜಿ. ಅರವಿಂದಕ್ಷನ್‌ ಮೆನನ್‌, ಟಿ.ಗಣಪತಿ, ಪ್ರಕಾಶ್‌ ಮೆನನ್‌, ಅಪ್ಪ ದುರೈ ಇವರಿಗೆ ಅತಿಥಿಗಳು “ಛತ್ರಪತಿ ಶಿವಾಜಿ ಮಹಾರಾಜ್‌ ಸಾಧನಾ ಪುರಸ್ಕಾರ-2018′ ಪ್ರದಾನಿಸಿ ಗೌರವಿಸಿದರು.

ಜಯರಾಮ್‌ ಶೆಟ್ಟಿ ಮತ್ತು ಪಿ. ಡಿ. ಶೆಟ್ಟಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಕೆ. ರಾಜೇ ಗೌಡ, ಪದ್ಮನಾಭ ಸಸಿಹಿತ್ಲು ಮತ್ತಿತರು ಉಪಸ್ಥಿತರಿದ್ದು  ಪುರಸ್ಕೃತರಿಗೆ ಅಭಿನಂದಿಸಿದರು. ಆರ್ಟ್‌  ಸೆಂಟರ್‌ನ ಮುಖ್ಯಸ್ಥ ಗೋಪಾಲಕೃಷ್ಣ ಪಿಳ್ಳೆ ಸ್ವಾಗತಿಸಿದರು. ನಿಹಾರಿಕ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.                     

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next