Advertisement

ಪಟಾಕಿ ನಿಷೇಧ: ಸುಪ್ರೀಂ ಆದೇಶಕ್ಕೆ ಚೇತನ್‌ ಭಗತ್‌ ಖಂಡನೆ

03:38 PM Oct 09, 2017 | udayavani editorial |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ವಲಯದಲ್ಲಿ ದೀಪಾವಳಿ ವೇಳೆ ಸುಡುಮದ್ದು ಮಾರಾಟವನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿರುವುದನ್ನು ಖ್ಯಾತ ಲೇಖಕ ಚೇತನ್‌ ಭಗತ್‌ ಖಂಡಿಸಿದ್ದಾರೆ.

Advertisement

ಹಿಂದೂ ಹಬ್ಬಗಳ ಮೇಲೆ ಮಾತ್ರವೇ ಸುಪ್ರೀಂ ಕೋರ್ಟ್‌ ಈ ರೀತಿಯ ನಿಷೇಧಗಳನ್ನು ಹೇರುತ್ತಿರುವುದು ಏಕೆ ಎಂದು ಟ್ವಿಟರ್‌ ನಲ್ಲಿ ಪ್ರಶ್ನಿಸಿರುವ ಚೇತನ್‌ ಭಗತ್‌, ಕ್ರೈಸ್ತ ಬಾಂಧವರ ಕ್ರಿಸ್‌ಮಸ್‌ ಹಬ್ಬದ ವೇಳೆ “ಕ್ರಿಸ್‌ಮಸ್‌ ಟ್ರೀ’ ಅಥವಾ ಮುಸ್ಲಿಂ ಬಾಂಧವರ ಬಕ್ರೀದ್‌ ಹಬ್ಬದ ವೇಳೆ ಆಡಿನ ಹತ್ಯೆಯನ್ನು ಏಕೆ ನಿಷೇಧಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಈ ವಿಷಯದಲ್ಲಿ ಚೇತನ್‌ ಭಗತ್‌ ಅವರನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಕೂಡ ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next