Advertisement

ಉಡುಪಿ: ಚೆಕ್‌ ಅಮಾನ್ಯ: ಆರೋಪಿಗೆ ಜೈಲು ಶಿಕ್ಷೆ

01:07 AM Mar 09, 2023 | Team Udayavani |

ಉಡುಪಿ: ಒಳಕಾಡು ನಿವಾಸಿ ಡಾ| ವಾದಿರಾಜ್‌ ಪುರಾಣಿಕ್‌ 8 ಲಕ್ಷ ರೂ. ಹಣವನ್ನು ಉದ್ಯಾವರದ ರೋಹಿತ್‌ ಎಸ್‌. ಹೆಗ್ಡೆ ಅವರಿಂದ ಸಾಲವಾಗಿ ಪಡೆದು ಅದಕ್ಕೆ ನೀಡಿದ್ದ ಚೆಕ್‌ಗಳು ಅಮಾನ್ಯಗೊಂಡ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ.

Advertisement

ಸಾಲದ ಬಗ್ಗೆ ಆರೋಪಿಯು ದೂರುದಾರರಿಗೆ ನೀಡಿದ ಚೆಕ್‌ಗಳು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ದೂರುದಾರರು ಉಡುಪಿಯ 2ನೇ ಅವರ ಸಿವಿಲ್‌ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ವಿನಾಯಕ ವಾಂಕಂಡ ಅವರು ಆರೋಪಿಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.

ದೂರುದಾರ ರೋಹಿತ್‌ ಎಸ್‌. ಹೆಗ್ಡೆ ಪರ ಉಡುಪಿಯ ವಕೀಲೆ ಶಾರ್ಲೆಟ್‌ ಫ‌ುರ್ಟಾಡೋ, ಸುಚಿತಾ ಅರುಣಾ ಶೆಟ್ಟಿ, ಅಕ್ಷತಾ ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next