Advertisement

ಚನ್ನಯ್ಯ ಸಮಾಜದ ಸವಲತ್ತುಗಳು ಇತರರ ಪಾಲು: ಬಸವರಾಜ ದೊಡ್ಮನಿ ಆಕ್ರೋಶ

05:17 PM Apr 19, 2022 | Suhan S |

ಸಾಗರ:  ರಾಜ್ಯದಲ್ಲಿ ಶೇ. 16ರಷ್ಡು ಇರುವ ಚನ್ನಯ್ಯ ಸಮಾಜದವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟದ ಮಾರ್ಗವನ್ನು ಹಿಡಿಯುವ ಸಂದರ್ಭ ಬಂದಿದೆ. ಈ ಕಾರಣಕ್ಕಾಗಿ ನಮ್ಮ ಸಮುದಾಯ ಎಲ್ಲಾ ಜನರು ಒಂದಾಗಿ ಸಾಗಬೇಕು ಎಂದು ಚನ್ನಯ್ಯ ಸಮಾಜದ ರಾಜ್ಯ ಅಧ್ಯಕ್ಷ ಬಸವರಾಜ ದೊಡ್ಮನಿ ಕರೆ ನೀಡಿದರು.

Advertisement

ಮಂಗಳವಾರ ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ನಮಗೆ ಮೀಸಲಾತಿ ನೀಡಿದೆ. ಆದರೆ ಇದು ಪ್ರಬಲ ಜಾತಿಗಳ ಪಾಲಾಗುತ್ತಿದೆ. ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದಾರೆ. ಇದರಿಂದ ಅನ್ಯ ಮೀಸಲು ಸಮುದಾಯಗಳಿಗೆ ಅನ್ಯಾಯ ಆಗುತ್ತಿದೆ. ನಮ್ಮ ಸಮುದಾಯದ ಅಭಿವೃದ್ಧಿಗೆ ನಾವೇ ಹೋರಾಡಬೇಕಿದೆ. ಒಗ್ಗಟ್ಟು ಶಕ್ತಿ ಪ್ರದರ್ಶನ ಆಗಬೇಕಿದೆ ಎಂದು ಹೇಳಿದರು.

ಸಾಗರ ತಾಲೂಕು ಚನ್ನಯ್ಯ ಸಮಾಜದ ಅಧ್ಯಕ್ಷ ರೇವಪ್ಪ ಕೆ. ಹೊಸಕೊಪ್ಪ ಮಾತನಾಡಿ, ಸಾಗರ, ಶಿವಮೊಗ್ಗ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಹೊಸನಗರದಲ್ಲಿ ಈಗಾಗಲೇ ರಾಜಕೀಯದಲ್ಲಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದೇವೆ. ಆದರೆ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಮುಂಬರುವ ದಿನಗಳಲ್ಲಿ ನಮಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಮತ್ತು ರಾಜಕೀಯ ಪ್ರಾತಿನಿಧ್ಯ ದೊರಕಿಸಿ ಕೊಡುವ ರಾಜಕೀಯ ಪಕ್ಷವನ್ನು ಮಾತ್ರ ಬೆಂಬಲಿಸುವ ಬಗ್ಗೆ ನಾವು  ಚಿಂತಿಸಿದ್ದೇವೆ ಎಂದರು.

ಚನ್ನಯ್ಯ ಸಮಾಜ ಈಗ ಜಿಲ್ಲೆಗಳು ಮತ್ತು ರಾಜ್ಯಾದ್ಯಂತ ಅತಿ ಹೆಚ್ಚಿನ ಜನಸಂಖ್ಯೆ ಮತ್ತು ಮತಗಳನ್ನು ಹೊಂದಿದೆ. ಮುಂಬರುವ ಚುನಾವಣೆಯಲ್ಲಿ ಎಚ್ವೆತ್ತುಕೊಂಡು ಮತಗಳ ಚಲಾವಣೆ ಮಾಡುತ್ತೇವೆ.  ಸ್ವತಂತ್ರ ಬಂದು 75 ವರುಷಗಳಾದರೂ ಚನ್ನಯ್ಯ ಸಮಾಜದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಿಲ್ಲ. ಈ ಕಾರಣಕ್ಕೆ ಸರಕಾರ ಕೆಲವು ಜಾತಿಗಳನ್ನು ಮೀಸಲು ಪಟ್ಟಿಯಿಂದ ಕೈಬಿಡಬೇಕು ಎಂದು ಹೇಳಿದರು.

ಸಭೆಯಲ್ಲಿ ಅಖಿಲ ಕರ್ನಾಟಕ ಚನ್ನಯ್ಯ ಬಲಗೈ ಸಮಾಜ ಅಭಿವೃದ್ಧಿ ಹೊರಾಟ ಸಮಿತಿಯ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಎಚ್.ಕೆ. ಬಸವಂತಪ್ಪ ಕೋಟೆ, ಚಂದ್ರಪ್ಪ ಜಿ. ಗುಡ್ನಾಪುರ, ರಾಜೇಂದ್ರ ಬಂದಗದ್ದೆ ಸಾಗರ, ಯಲ್ಲಪ್ಪ ಬಿ. ಬೇಡನಕೊಪ್ಪ, ಬೂದೇಶ ಬಿ.ಎಚ್., ಎ.ಕೆ. ನಾಗರಾಜ, ಮಂಜಪ್ಪ ಅಲಗೇರಿಮಂಡ್ರಿ, ಎಚ್.ಕೆ. ಶಿವಾನಂದ ಕಾನಗೋಡು, ಹೊಳಲಿಂಗ, ಎ.ಕೆ. ನಾಗರಾಜ, ಮಂಜಪ್ಪ, ಆಲಗೇರಿಮಂಡ್ರಿ, ಬಿ.ಎಚ್., ಹಾಲೇಶ್ ಜಿ. ಚಿಕ್ಕಸವಿ, ವಿಶ್ವನಾಥ ಹಾರೋಗಳಿಗೆ, ಹೊಳೆಲಿಂಗ ಬಿ.ಎಚ್., ಸುಜಾತ ರಿಪ್ಪನ್‌ಪೇಟೆ, ರಂಗಪ್ಪ ಹೊನ್ನೇಸರ, ರೇವಣಪ್ಪ ಸಾಂಡಾ, ಬಿದರಗೇರಿಬ ರೇವಣಪ್ಪ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next