Advertisement

ರಾಜಸ್ಥಾನ: ಚೆನ್ನೈ ಇನ್ಸ್‌ಪೆಕ್ಟರ್‌ ದುಷ್ಕರ್ಮಿಗಳ ಗುಂಡಿಗೆ ಬಲಿ

03:51 PM Dec 13, 2017 | udayavani editorial |

ಜೋಧ್‌ಪುರ : ಕೆಲವು ವಾರಗಳ ಹಿಂದೆ ನಡೆದಿದ್ದ ಕೊಳತೂರು ಗಿರವಿ ಅಂಗಡಿ ಕಳವಿನ ಪ್ರಕರಣದ ಶಂಕಿತರನ್ನು ಹಿಡಿಯುವ ಯತ್ನದಲ್ಲಿದ್ದ ತಮಿಳು ನಾಡಿನ ಮಧುರಾವೋಯಲ್‌ ಕಾನೂನು ಮತ್ತು ಸುವ್ಯವಸ್ಥೆ ಇನ್ಸ್‌ಪೆಕ್ಟರ್‌ ಎಸ್‌ ಪೆರಿಯಪಾಂಡಿ ಅವರನ್ನು ಗುಂಡಿಕ್ಕಿ ಸಾಯಿಸಲಾಗಿದೆ. 

Advertisement

ಕೊಳತೂರಿನ ಗಿರವಿ ಅಂಗಡಿಯೊಂದರಲ್ಲಿ ಭಾರೀ ಕಳ್ಳತನ ನಡೆಸಿದ್ದ ರಾಜಸ್ಥಾನದ ಪಾಲಿ ಜಿಲ್ಲೆಯ ನಾಥೂರಾಮ್‌ ಮತ್ತು ಆತನ ಸಹವರ್ತಿ, ಜೋಧಪುರ ಚೌಧರಿ ಅವರನ್ನು ಸೆರೆ ಹಿಡಿಯುವ ವಿಶೇಷ ತಂಡದ ನೇತೃತ್ವವನ್ನು ಪೆರಿಯಪಾಂಡಿ ವಹಿಸಿದ್ದರು. 

ಆರೋಪಿಗಳು ಪಾಲಿ ಜಿಲ್ಲೆಯ ರಾಮಪುರ ಕಲನ್‌ ಗ್ರಾಮದಲ್ಲಿನ ಗೋದಾಮೊಂದರಲ್ಲಿ ಅಡಗಿ ಕುಳಿತ ಮಾಹಿತಿ ಪಡೆದ ಪೆರಿಯಪಾಂಡಿ ತಂಡ ಅಲ್ಲಿಗೆ ಹೋಗಿದ್ದಾಗ ನಾಥೂರಾಮ್‌ ಮತ್ತು ಆತನ ಸಹಚರ, ಪೆರಿಯಪಾಂಡಿ ಅವರ ಸರ್ವೀಸ್‌ ಪಿಸ್ತೂಲನ್ನು ಕಸಿದುಕೊಂಡು ಅದರಿಂದಲೇ ಗುಂಡೆಸೆದು ಪೆರಿಯಪಾಂಡಿ ಅವರನ್ನು ಕೊಂದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next