Advertisement
ಏನಿದು ಪ್ರಕರಣ:
Related Articles
Advertisement
ದೇಸಪ್ರಿಯ ತಿರುವಣ್ಣಾಮಲೈ ನಿವಾಸಿಯಾಗಿದ್ದು, ಈಕೆ ಹಳೇ ಮಹಾಬಲಿಪುರಂ ರಸ್ತೆಯ ಕಳವಕ್ಕಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಳು. ದೇಸಪ್ರಿಯಳ ಪ್ರಿಯಕರ ಅರುಣ್ ಪಾಂಡ್ಯಯನ್ ಉಳುಂದುರ್ ಪೆಟ್ ನಿವಾಸಿಯಾಗಿದ್ದು, ಈತ ಕಟ್ಟಾನ್ ಕುಳತ್ತೂರ್ ವಿವಿಯಲ್ಲಿನ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 1.30ಕ್ಕೆ ದೇಸಪ್ರಿಯ ಸೆಂಥಿಲ್ ಗೆ ಕರೆ ಮಾಡಿ ತನ್ನ ಕಾಲೇಜಿನಲ್ಲಿ ಭೇಟಿಯಾಗುವಂತೆ ತಿಳಿಸಿದ್ದಳು. ಇಬ್ಬರು ಕಾಲೇಜು ಹೊರಭಾಗದಲ್ಲಿ ಮಾತನಾಡುತ್ತಿದ್ದ ವೇಳೆ ಅರುಣ್ ಪಾಂಡ್ಯಯನ್ ಜತೆಗೂಡಿದ್ದ. ಮೂವರ ನಡುವೆ ವಾಕ್ಸಮರ ನಡೆಯುತ್ತಿದ್ದಾಗಲೇ, ದೇಸಪ್ರಿಯ ಮತ್ತು ಅರುಣ್ ಪಾಂಡ್ಯಯನ್ ಸೆಂಥಿಲ್ ನ ಗಂಟಲು ಸೀಳಿ, ಹಲವಾರು ಬಾರಿ ಚೂರಿಯಿಂದ ಇರಿದಿದ್ದರು.
ಈ ಸಂದರ್ಭದಲ್ಲಿ ದೇಸಪ್ರಿಯ ಹಾಗೂ ಪಾಂಡ್ಯಯನ್ ಘಟನ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದರು. ಆದರೆ ಜನರು ಇಬ್ಬರನ್ನೂ ಹಿಡಿದು ಪೊಲೀಸರಿಗೊಪ್ಪಿಸಿದ್ದರು ಎಂದು ವರದಿ ತಿಳಿಸಿದೆ. ಸೆಂಥಿಲ್ ವಿವಾಹವಾಗಿದ್ದು, ಆತನ ಪತ್ನಿ ತವರಿನಲ್ಲಿದ್ದಳು. ಆದರೆ ಈತ ತನಗೆ ಪದೇ, ಪದೇ ವಿವಾಹವಾಗುವಂತೆ ಕಿರುಕುಳ ನೀಡುತ್ತಿದ್ದ ಎಂದು ದೇಸಪ್ರಿಯ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ತಾನು ವಿವಾಹವಾಗಿ ಏಳು ವರ್ಷವಾಯ್ತು ಆದರೆ ಮಕ್ಕಳಾಗಿಲ್ಲ. ಹೇಗಾದರೂ ಮಾಡಿ ಪತ್ನಿಯ ಮನವೊಲಿಸಿ, ಎರಡನೇ ವಿವಾಹವಾಗುವುದಾಗಿ ಸೆಂಥಿಲ್ ತನಗೆ ತಿಳಿಸಿದ್ದರು ಎಂದು ದೇಶಪ್ರಿಯ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾಳೆ.