Advertisement

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

07:23 PM Sep 19, 2024 | Team Udayavani |

ಚೆನ್ನೈ: ಗ್ರಾಹಕರೊಬ್ಬರು ನಿಂದಿಸಿದ್ದಕ್ಕೆ ಮನನೊಂದು ಫುಡ್ ಡೆಲಿವರಿ ಮಾಡುವ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

Advertisement

ಬಿಕಾಂ ವಿದ್ಯಾರ್ಥಿಯಾಗಿದ್ದ ಪವಿತ್ರನ್ ಬಿಡುವಿನ ವೇಳೆ ಫುಡ್‌ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದ. ಸೆಪ್ಟೆಂಬರ್ 11 ರಂದು ಕೊರಟ್ಟೂರು ಪ್ರದೇಶದಲ್ಲಿ ಫುಡ್‌ ಡೆಲಿವರಿ ಮಾಡಲು ಹೋಗಿದ್ದಾಗ ಕೆಲ ನಿಮಿಷ ತಡವಾಗಿತ್ತು. ತಡವಾದ ಕಾರಣದಿಂದ ಆಹಾರವನ್ನು ತೆಗೆದುಕೊಳ್ಳುವ ಗ್ರಾಹಕ ಪವಿತ್ರನ್‌ ಅವರಿಗೆ ನಿಂದಿಸಿ, ಬೈಯ್ದಿದ್ದಾರೆ.

ಇದನ್ನೂ ಓದಿ: BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

ಇದರಿಂದ ಮನನೊಂದು ಮನೆಗೆ ಬಂದಿದ್ದ ಪವಿತ್ರನ್‌ ಎರಡು ದಿನಗಳ ನಂತರ ನಿಂದಿಸಿದ್ದ ಗ್ರಾಹಕರ ನಿವಾಸದ ಮೇಲೆ ಕಲ್ಲು ಎಸೆದು, ಕಿಟಕಿಯನ್ನು ಒಡೆದು ಹಾಕಿದ್ದ. ಈ ಘಟನೆಯಿಂದಾಗಿ ಅವರು ಯುವಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಇದರಿಂದ ಮನನೊಂದಿದ್ದ ಪವಿತ್ರನ್‌ ಬುಧವಾರ (ಸೆ.18ರಂದು) ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಘಟನಾ ಸ್ಥಳದಲ್ಲಿ ಪತ್ರವೊಂದು ಸಿಕ್ಕಿದ್ದು, “ಫುಡ್‌ ಡೆಲಿವರಿ ಸಮಯದಲ್ಲಿ ವ್ಯಕ್ತಿಯಿಂದ ನಿಂದಿಸಲ್ಪಟ್ಟ ನಂತರ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಇಂತಹ ಮಹಿಳೆಯರು ಇರುವವರೆಗೆ ಹೆಚ್ಚಿನ ಸಾವುಗಳು ಸಂಭವಿಸುತ್ತವೆ” ಎಂದು ಬರೆದುಕೊಂಡಿದ್ದರು.

ಕೊಳತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next