Advertisement

Ramanagara: ಅರ್ಕಾವತಿ ನದಿಗೆ ರಾಸಾಯನಿಕ ಸೇರ್ಪಡೆ; 11ವಾರ್ಡ್ ಗಳಿಗೆ ನೀರು ಸರಬರಾಜು ಸ್ಥಗಿತ

03:23 PM Jul 06, 2023 | Team Udayavani |

ರಾಮನಗರ: ರಾಸಾಯನಿಕ ಸೇರ್ಪಡೆಯಿಂದ ಅರ್ಕಾವತಿ ನದಿಯ ನೀರು ಕಲುಷಿತಗೊಂಡು ಕುಡಿಯುವ ನೀರು ಸರಬರಾಜು ವ್ಯತ್ಯಯವಾದ ಘಟನೆ ರಾಮನಗರದಲ್ಲಿ ನಡೆದಿದೆ.

Advertisement

11 ವಾರ್ಡ್ ಗಳಿಗೆ ಕುಡಿಯುವ ನೀರು ಸರಬರಾಜು ತಾತ್ಕಾಲಿಕ ಸ್ಥಗಿತವಾಗಿದ್ದು, ಈ ಕುರಿತು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ರಾಮನಗರ ಟೌನ್ ವ್ಯಾಪ್ತಿಯ 11 ವಾರ್ಡ್ ಗಳಿಗೆ ನೀರು ಸರಬರಾಜು ಸ್ಥಗಿತ ಮಾಡಲಾಗಿದೆ.

ಕೋಳಿ ಸಾಕಾಣಿಕಾ ಘಟಕವೊಂದು ಅರ್ಕಾವತಿ ನದಿಗೆ ರಾಸಾಯನಿಕ ಹಾಗೂ ಗಲೀಜು ನೀರು ಬಿಡುತ್ತಿದೆ. ಇದರಿಂದ ನೀರು ಕಲುಷಿತಗೊಂಡಿದೆ. ಕೋಳಿ ಸಕಾಣಿಕಾ ಘಟಕದ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next