Advertisement

ತ್ರಾಸಿ ಪರಿಸರದಲ್ಲಿ ರಾಸಾಯನಿಕ ಸಿಂಪಡಣೆ

10:55 PM Jun 07, 2020 | Team Udayavani |

ಗಂಗೊಳ್ಳಿ: ಕೋವಿಡ್‌ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ತ್ರಾಸಿ ಗಾ.ಪಂ. ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ರಾಸಾಯನಿಕ ದ್ರವದ ಸಿಂಪಡಣೆ ಮಾಡುವ ಮೂಲಕ ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿ ಸ್ಯಾನಿಟೈಸ್‌ ಮಾಡಿದರು.

Advertisement

ತ್ರಾಸಿಯ ವಿವಿಧ ಶಾಲೆಗಳಲ್ಲಿ ಹೊರ ರಾಜ್ಯದಿಂದ ಬಂದಿರುವವರು ಕ್ವಾರಂಟೈನ್‌ನಲ್ಲಿ ಇದ್ದುದರಿಂದ ಶಾಲೆಗಳನ್ನು, ತ್ರಾಸಿ ಬಸ್‌ ನಿಲ್ದಾಣ, ರಿಕ್ಷಾ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಯಾನಿಟೈಸ್‌ ಮಾಡಲಾಯಿತು.

ಶನಿವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬಂದಿ ತ್ರಾಸಿ ಬಸ್‌ ನಿಲ್ದಾಣ ಪ್ರದೇಶದಲ್ಲಿ ಸ್ಯಾನಿಟೈಸ್‌ ಮಾಡುತ್ತಿರುವುದು ಸ್ಥಳೀಯ ರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿತು. ಕ್ವಾರಂಟೆ„ನ್‌ ಮುಗಿಸಿ ಜನರು ತೆರಳಿದ್ದರೂ ಶಾಲೆಗಳನ್ನು ಸ್ಯಾನಿಟೈಸ್‌ ಮಾಡಿಲ್ಲ. ಆ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶಾಲೆ, ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next