Advertisement

ತೀರ್ಥಹಳ್ಳಿ: ದಾಂಧಲೆ ನಡೆಸುತ್ತಿದ್ದ ಚಿರತೆ ಹಸಿವಿನ ಭಾದೆಯಿಂದ ದುರ್ಮರಣ !

03:09 PM Apr 07, 2023 | Kavyashree |

ತೀರ್ಥಹಳ್ಳಿ: ಕಳೆದ 3 ತಿಂಗಳಿನಿಂದ ನೊಣಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೇಸರ ಸುತ್ತಮುತ್ತ ನಾಯಿಗಳನ್ನು ಹಿಡಿದು ತಿಂದು ಜಾನುವಾರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಯೊಂದು ಕಾಲಿಗೆ ಪೆಟ್ಟಾದ ಕಾರಣ ಓಡಾಡಲು ಸಾಧ್ಯವಾಗದೆ ಹಸಿವಿನ ಭಾದೆಯಿಂದ ಮರಣ ಹೊಂದಿದ ಘಟನೆ ನಡೆದಿದೆ. ‌

Advertisement

ಈ ಚಿರತೆಯನ್ನು ಜೀವಂತ ಹಿಡಿಯಲು ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಮಲ್ಲೇಸರರವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಕಾಡಿನಲ್ಲಿ ಬೋನ್ ತಂದಿರಿಸಿ 15 ದಿನ ಕಾದರೂ ಚಿರತೆ ಸಿಕ್ಕಿರಲಿಲ್ಲ.

ಕಳೆದ ಒಂದು ತಿಂಗಳು ನಾಪತ್ತೆಯಾಗಿದ್ದ ಚಿರತೆ ಏ. 7 ರಂದು ಮಲ್ಲೇಸರ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಚಿರತೆ ಐದಾರು ನಾಯಿಗಳನ್ನು ಹಿಡಿದು ತಿಂದಿದ್ದು, ಹಲವಾರು ಜಾನುವಾರುಗಳ ಮೇಲೆ ಹಲ್ಲೆ ನಡೆಸಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next