Advertisement

ನಿಟ್ಟೆ ಲೆಮಿನಾ ಬಳಿ ಬಾವಿಗೆ ಬಿದ್ದ ಚಿರತೆ ರಕ್ಷಣೆ

08:15 AM Aug 05, 2017 | Team Udayavani |

ಬೆಳ್ಮಣ್‌: ನಿಟ್ಟೆ ಗ್ರಾಮದ ಲೆಮಿನಾ ಬಳಿ ಶುಕ್ರವಾರ ಚಿರತೆಯೊಂದು ಬಾವಿಗೆ ಬಿದ್ದಿದ್ದು ಕಾರ್ಕಳ ವಲಯ ಅರಣ್ಯಾಧಿಕಾರಿಗಳು ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ನಿಟ್ಟೆ ಲೆಮಿನಾ ಬಳಿಯ ಜುಲಿಯಾನ ನೊರೋನ್ಹಾ ಅವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಗಮನಿಸಿದ್ದು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.

Advertisement

ಈ ಸಂದರ್ಭ ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್‌, ಬೆಳ್ಮಣ್‌ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಕಾರ್ಕಳ ವಲಯದ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್‌, ರಾಜಶೇಖರ್‌ ಸ್ಥಳಕ್ಕಾಗಮಿಸಿ ಶ್ರಮವಹಿಸಿ ಚಿರತೆಯನ್ನು ರಕ್ಷಿಸಿದರು. ಅರಣ್ಯ ರಕ್ಷಕರಾದ ಗಣೇಶ್‌ ದೇವಾಡಿಗ, ಆನಂದ್‌, ಕೃಷ್ಣಪ್ಪ, ಅರಣ್ಯ ವೀಕ್ಷಕರಾದ ಶ್ರೀಧರ್‌ ಪೂಜಾರಿ, ಬಾಬು, ಪ್ರಕಾಶ್‌, ಪಕೀರಪ್ಪ, ವಾಹನ ಚಾಲಕ ಅನ್ವರ್‌ ಹಾಗೂ ಗ್ರಾಮಸ್ಥರು ಚಿರತೆಯನ್ನು ರಕ್ಷಿಸುವಲ್ಲಿ ಸಹಕರಿಸಿದರು. ಈ ಚಿರತೆ ಹಲವಾರು ದಿನಗಳಿಂದ ಈ ಪ್ರದೇಶದಲ್ಲಿ ರಾತ್ರಿ ಹೊತ್ತು ತಿರುಗಾಟ ನಡೆಸುತ್ತಿತ್ತೆಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next