Advertisement

ಶ್ವಾನ ಬೇಟೆಗೆ ಬಂದ ಚಿರತೆ ಸೆರೆ

05:40 PM Feb 06, 2018 | Team Udayavani |

ರಾಮನಗರ: ಆಹಾರ ಅರಸಿ ಬಂದ ಚಿರತೆಯೊಂದು ಗ್ರಾಮದಲ್ಲಿದ್ದ ನಾಯಿ ಬೇಟೆಯಾಡಲು ಹೋಗಿ ಸಿಕ್ಕಿ ಬಿದ್ದಿರುವ
ಘಟನೆ ತಾಲೂಕಿನ ಸಂಗಬಸವನದೊಡ್ಡಿಯಲ್ಲಿ ನಡೆದಿದೆ.

Advertisement

ಸೋಮವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಆಹಾರ ಅರಸಿ ಸಂಗಬಸನವದೊಡ್ಡಿ ಗ್ರಾಮಕ್ಕೆ ಬಂದ ಚಿರತೆಗೆ ರವಿ ಎಂಬುವರಿಗೆ ಸೇರಿದ ಮನೆಯ ಬಳಿ ನಾಯಿಯೊಂದು ಕಾಣಿಸಿಕೊಂಡಿದೆ. ಅದನ್ನು ಬೇಟೆಯಾಡಲು ಮುಂದಾದಾಗ ನಾಯಿ ತಪ್ಪಸಿಕೊಂಡು ಅಲ್ಲೆ ಇದ್ದ ದನಕ ಕೊಠಡಿಯೊಳಗೆ ನುಗ್ಗಿದೆ. ಚಿರತೆಯೂ ದನದ ಕೊಟ್ಟಿಗೆಗೆ ನುಗ್ಗಿದೆ, ಆದರೆ ನಾಯಿ ತಪ್ಪಿಸಿಕೊಂಡು ಹೊರ ಬಂದು ತೀವ್ರವಾಗಿ ಬೊಗಳಲಾರಂಭಿಸಿದೆ. ಸದ್ದು ಕೇಳಿ ಬಂದ ಸುತ್ತಮುತ್ತಲಿನ ಮನೆಯವರು ದನದ ಕೊಟ್ಟಿಗೆಯಲ್ಲಿರುವ ಚಿರತೆ ಕಂಡು ಹೌಹಾರಿ, ಕೊಟ್ಟಿಗೆಯ ಬಾಗಿಲನ್ನು ಭದ್ರಪಡಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರನ್ನು ಕರೆಸಿಕೊಂಡು ಕೊಟ್ಟಿಗೆಯಲ್ಲಿ ಬಂಧನವಾಗಿದ್ದ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ಧಾರೆ. ಪ್ರಜ್ಞೆ ತಪ್ಪಿದ ಚಿರತೆಯನ್ನು ಬೋನಿನಲ್ಲಿ
ಕೂಡಿಹಾಕಿದ್ದಾರೆ.

 ಮೂರು ವರ್ಷದ ಗಂಡು ಚಿರತೆಯನ್ನು ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಬಿಡುವುದಾಗಿ ತಿಳಿಸಿದ್ದಾರೆ. ಈ ಭಾಗದಲ್ಲಿ ಇನ್ನು ಕೆಲವು ಚಿರತೆಗಳಿವೆ, ಅವುಗಳನ್ನು ಹಿಡಿಯಿರಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next