Advertisement

Hunsur: ಚಿರತೆ ದಾಳಿಗೆ ಹಸು ಬಲಿ

09:38 AM Sep 06, 2023 | Team Udayavani |

ಹುಣಸೂರು: ಹಸುವನ್ನು ಮೇಯಲು ಬಿಟ್ಟಿದ್ದ ವೇಳೆ ಹಾಡಹಗಲೇ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿರುವ  ಘಟನೆ ತಾಲೂಕಿನ ಬಿ.ಆರ್.ಕಾವಲ್ ಗ್ರಾಮದಲ್ಲಿ ಸೆ.5ರ ಮಂಗಳವಾರ ನಡೆದಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ಬಿ.ಆರ್.ಕಾವಲು ಗ್ರಾಮದ ಪ್ರಮೀಳಾ ಎಂಬವರಿಗೆ ಸೇರಿದ 50 ಸಾವಿರ ಬೆಲೆ ಬಾಳುವ ಹಸು ಇದಾಗಿತ್ತು ಎನ್ನಲಾಗಿದೆ.

ಪಕ್ಕದ ಬೀರತಮ್ಮನಹಳ್ಳಿ ಮೀಸಲು ಅರಣ್ಯದಂಚಿನ ಈಶ್ವರ್ ಅವರ ಜಮೀನಿನಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದ ವೇಳೆ ಕಾಡಿನಿಂದ ಬಂದ ಚಿರತೆ ದಾಳಿ ನಡೆಸಿದೆ. ಪಶು ವೈದ್ಯಕೀಯ ಇಲಾಖೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.

ಅರಣ್ಯ ಸಿಬ್ಬಂದಿ ಮಹೇಶ್, ವಸಂತ ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next