Advertisement

Mangaluru ಚೆಕ್‌ ಅಮಾನ್ಯ: ಪ್ರಕರಣ ದಾಖಲು

12:08 AM Dec 20, 2023 | Team Udayavani |

ಮಂಗಳೂರು: ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದಂತೆ ನೀಡಿದ 40 ಲಕ್ಷ ರೂ. ಮೌಲ್ಯದ ಚೆಕ್‌ ಅಮಾನ್ಯ
ವಾಗಿರುವ ಬಗ್ಗೆ ನಗರದ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಂಗಳೂರಿನ ಸೆಲ್ವ ಕುಮಾರ್‌ ಜಾಗ ಕೊಡಿಸುವುದಾಗಿ ನಂಬಿಸಿ ಒಟ್ಟು 40 ಲಕ್ಷ ರೂ. ಹಣ ಮುಂಗಡವಾಗಿ ಪಡೆದಿದ್ದ. ಆದರೆ ಜಾಗ ಕೊಡಿಸಲಿಲ್ಲ. ಹಣ ವಾಪಸ್‌ ಕೇಳಿದಾಗ 40 ಲಕ್ಷ ರೂ.ಗಳ ಚೆಕ್‌ ನೀಡಿದ್ದ.

ಬ್ಯಾಂಕ್‌ಗೆ ಹಾಕಿದಾಗ ಅದು ಅಮಾನ್ಯವಾಗಿತ್ತು ಎಂದು ವ್ಯಕ್ತಿಯೋರ್ವರು ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next