Advertisement

ಎರಡು ಪ್ರಕರಣ ಚೆಕ್‌ ಬೌನ್ಸ್‌ ಪ್ರಕರಣ: ವಾರಂಟ್‌ ಅರೋಪಿಗಳಿಬ್ಬರ ಬಂಧನ

10:11 AM Jul 22, 2019 | Team Udayavani |

ಪುತ್ತೂರು: ಎರಡು ಪ್ರತ್ಯೇಕ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

Advertisement

ಬೊಳುವಾರು ನಿವಾಸಿ ವೇಣು ಗೋಪಾಲ ಮತ್ತು ಕಲ್ಲಾರೆ ನಿವಾಸಿ ತೀರ್ಥಾನಂದ ಬಂಧಿತರು. ವೇಣುಗೋಪಾಲ ಅವರು ನ್ಯಾಯವಾದಿ ಮಹಾಬಲ ಗೌಡ ಎಂಬವರಿಗೆ ನೀಡಿದ್ದ ಚೆಕ್‌ಗೆ ಸಂಬಂಧಿಸಿ ಕೋರ್ಟು ಕೇಸು ನಡೆಯುತ್ತಿದ್ದು, ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಾರಂಟ್‌ ಜಾರಿಯಾಗಿತ್ತು.

ತೀರ್ಥಾನಂದ ಅವರು ನವಚೇತನ ಚಿಟ್‌ ಪಂಡ್‌ಗೆ ನೀಡಿದ್ದ ಚೆಕ್‌ಗೆ ಸಂಬಂಧಿಸಿ ಕೇಸು ದಾಖಲಾಗಿತ್ತು. ಅವರು ಕೂಡ ವಿಚಾರಣೆಗೆ ಹಾಜರಾಗದೆ ತಲೆಮೆರೆಸಿಕೊಂಡಿದ್ದು, ನ್ಯಾಯಾಲಯ ವಾರಂಟ್‌ ಜಾರಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next