Advertisement

Mangalore: ಚೆಕ್‌ ಬೌನ್ಸ್‌ ಪ್ರಕರಣ; ಆರೋಪಿ ದೋಷಮುಕ್ತ

11:49 PM Dec 28, 2023 | Team Udayavani |

ಮಂಗಳೂರು: ಒಂದು ಕೋಟಿ ರೂ. ಮೊತ್ತದ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಪಾರ್ವತಿ ಸಿ.ಎಂ. ಅವರು ಗುರುವಾರ ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದ್ದಾರೆ.

Advertisement

ದೂರುದಾರರಾದ ಸಂತೋಷ್‌ ಅವರಿಗೆ ಅವರ ಅಣ್ಣ, ಪ್ರಕರಣದಲ್ಲಿ ಆರೋಪಿಯಾಗಿದ್ದ ಸಿದ್ದಿಗಣಪತಿ ಅವರು ಆಸ್ತಿಯ ಪಾಲಿಗೆ ಸಂಬಂಧಿಸಿದಂತೆ ಒಂದು ಕೋಟಿ ರೂ. ಮೊತ್ತದ ಚೆಕ್ಕನ್ನು ನೀಡಿದ್ದರು. ಚೆಕ್ಕನ್ನು ಬ್ಯಾಂಕ್‌ಗೆ ನಗದೀಕರಣಕ್ಕಾಗಿ ಸಲ್ಲಿಸಿದಾಗ ಅಮಾನ್ಯಗೊಂಡಿರುವುದರಿಂದ ಶಿಕ್ಷಾರ್ಹ ಅಪರಾಧ ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿ ಈ ಆಪಾದನೆಯನ್ನು ಅಲ್ಲಗಳೆದು ಪ್ರಕರಣದಲ್ಲಿ ಆಸ್ತಿ ತನ್ನ ಸ್ವಯಾರ್ಜಿತ ಆಸ್ತಿ, ತಾನು ಯಾವುದೇ ಚೆಕ್‌ ನೀಡಿಲ್ಲ ಎಂದು ಪ್ರತಿಪಾದಿಸಿದ್ದರು.
ಪ್ರಕರಣದಲ್ಲಿ ಆರೋಪಿ ಪರ ವಕೀಲ ಬಿ. ಜಿನೇಂದ್ರ ಕುಮಾರ್‌ ಮತ್ತು ತಂಡ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next