Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಕುಲಪತಿಯಾಗಿ ಚಟಪಲ್ಲಿ ಅಧಿಕಾರ ಸ್ವೀಕಾರ

07:32 AM May 28, 2020 | mahesh |

ಗದಗ: ನಗರದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ| ವಿಷ್ಣುಕಾಂತ ಎಸ್‌. ಚಟಪಲ್ಲಿ ಅವರು ಇತ್ತೀಚೆಗೆ ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾವಿವಿ ವಿಶ್ರಾಂತ ಕುಲಪತಿ ಪ್ರೊ| ಬಿ. ತಿಮ್ಮೇಗೌಡ, ಕುಲಸಚಿವ ಪ್ರೊ| ಸುರೇಶ ವಿ. ನಾಡಗೌಡರ ಮತ್ತಿತರರು ಇದ್ದರು. ನೂತನ ಕುಲಪತಿಗೆ ಪುಷ್ಪಗುತ್ಛ ನೀಡಿ ಶುಭ ಕೋರಿದರು. ಈ ಹಿಂದಿನ ಕುಲಪತಿ ಪ್ರೊ| ಬಿ. ತಿಮ್ಮೇಗೌಡ ಅವರು 2019ರ ಆಗಸ್ಟ್‌ 7ರಂದು ನಿವೃತ್ತರಾಗಿದ್ದರು. ಬಳಿಕ ಗ್ರಾವಿವಿ ಕುಲಸಚಿವರಾಗಿದ್ದ ಡಾ| ಸುರೇಶ ವಿ. ನಾಡಗೌಡರ್‌ ಅವರು ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸಿದರು. ಇದೀಗ ರಾಜ್ಯಪಾಲರ ಆದೇಶದ ಮೇರೆಗೆ ಡಾ| ವಿಷ್ಣುಕಾಂತ ಚಟಪಲ್ಲಿ ಅವರು ಅಧಿ ಕಾರ ಸ್ವೀಕರಿಸಿದರು. ಚಟಪಲ್ಲಿ ಅವರು ಈ ಹಿಂದೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊಫೆಸರ್‌, ನ್ಯಾಕ್‌ ಕಮಿಟಿ ಸದಸ್ಯ ಸೇರಿದಂತೆ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next