Advertisement

ಚಾರ್ಮಾಡಿ ಘಾಟಿ ರಸ್ತೆ ಬಂದ್ :ಸವಾರರ ಪರದಾಟ :ಜಿಲ್ಲಾಧಿಕಾರಿಗಳ ದಿಢೀರ್ ನಿರ್ಧಾರಕ್ಕೆ ಆಕ್ರೋಶ

08:20 PM Jul 23, 2021 | Team Udayavani |

ಚಿಕ್ಕಮಗಳೂರು : ದಿಢೀರ್ ಆಗಿ ಚಾರ್ಮಾಡಿ ಘಾಟಿ ರಸ್ತೆ ಸಂಚಾರ ಬಂದ್ ಮಾಡಿದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ವಾಹನಗಳು ಸಾಲು ಗಟ್ಟಿ ನಿಂತಿದ್ದು ವಾಹನ ಸವಾರರು ಜಿಲ್ಲಾಧಿಕಾರಿ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮರಗಳು ಉರುಳುತ್ತಿದ್ದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಇಂದಿನಿಂದ (ಜುಲೈ 23) ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ವಾಹನ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ, ಪರಿಣಾಮ ಈ ಮಾರ್ಗವಾಗಿ ಸಂಚರಿಸುವ ಎಲ್ಲಾ ವಾಹನಗಳನ್ನು ಪೊಲೀಸರು ತಡೆದಿದ್ದು ಇದರಿಂದ ಕೊಟ್ಟಿಗೆಹಾರ ಬಳಿ ವಾಹನ ದಟ್ಟಣೆ ಉಂಟಾಗಿದೆ. ಅಲ್ಲದೆ ವಾಹನ ಸವಾರರಿಗೆ ರಸ್ತೆ ಬಂದ್ ಮಾಡಿರುವ ವಿಷಯ ತಿಳಿಯದಿದ್ದುದರಿಂದ ಗೊಂದಲಕ್ಕಿಡಾಗಿದ್ದರೆ. ಮಧ್ಯೆ ದಾರಿಯಲ್ಲಿ ನಿಲ್ಲಿಸಿದ್ರೆ ನಾವು ಎಲ್ಲಿಗೆ ಹೋಗೋದು.? ಮೊದಲೇ ಆದೇಶ ಮಾಡಿದ್ರೆ ಘಾಟ್ ರಸ್ತೆಯಲ್ಲಿ ಬರುತ್ತಿರಲಿಲ್ಲವೆಂದು ವಾಹನ ಸವಾರರು ಜಿಲ್ಲಾಧಿಕಾರಿಗಳ ದಿಢೀರ್ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಕೃಷ್ಣಾ ನದಿ ತೀರದ ಹಳ್ಳಿಗರಿಗೆ ಡಂಗುರದ ಎಚ್ಚರಿಕೆ : ನೆರವಿಗೆ ಸಹಾಯವಾಣಿ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next