Advertisement

ಚಾರ್ಮಾಡಿ: ಇಂದೂ ವಾಹನ ಸಂಚಾರ‌ವಿಲ್ಲ

02:19 AM Aug 09, 2019 | Sriram |

ಬೆಳ್ತಂಗಡಿ: ಚಾರ್ಮಾಡಿಯ ರಾ.ಹೆ.73ರಲ್ಲಿ ಗುಡ್ಡ ಕುಸಿತಗೊಂಡಿರುವ ಸ್ಥಳದಲ್ಲಿ ಜೆಸಿಬಿಯಿಂದ ಮಣ್ಣು ತೆರವು ಕಾರ್ಯ ಗುರುವಾರ ಬಹುತೇಕ ಪೂರ್ಣಗೊಂಡಿದೆ. ಆದರೆ ಮುನ್ನೆಚ್ಚರಿಕೆಯಾಗಿ ಆಗಸ್ಟ್‌ 9ರ ಮಧ್ಯರಾತ್ರಿ 12 ಗಂಟೆ ತನಕವೂ ವಾಹನಗಳ ಸಂಚಾರ ನಿಷೇಧವನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

2ನೇ ತಿರುವಿನಿಂದ ಅಣ್ಣಪ್ಪ ಬೆಟ್ಟದವರೆಗೆ 20ಕ್ಕೂ ಹೆಚ್ಚು ಕಡೆ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, 2, 7, 8 ತಿರುವು ಮಧ್ಯೆ 5ಕಡೆ ಸಂಭವಿಸಿದ ಬೃಹದಾಕಾರದ ಮಣ್ಣು ಕುಸಿತ ಹಾಗೂ ಕಲ್ಲನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಘಾಟಿ ಮಧ್ಯ 30ಕ್ಕೂ ಹೆಚ್ಚು ಮರಗಳು ಉರುಳಿವೆ.

ಪೊಲೀಸ್‌ ಗಸ್ತು
ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಪೊಲೀಸ್‌ ವ್ಯಾನ್‌ ಹಾಗೂ ಕಕ್ಕಿಂಜೆ ಕ್ಲಸ್ಟರ್‌ನ ಎಸ್‌ಕೆಎಸ್‌ಎಫ್‌ ತಂಡ ಆ್ಯಂಬುಲೆನ್ಸ್‌ ಮುಖೇನ ಗಸ್ತು ತಿರುಗುತ್ತಿದೆ. ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಹೆದ್ದಾರಿ ಇಂಜಿನಿಯರ್‌ಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದರು. ವಿದ್ಯುತ್‌ ವ್ಯತ್ಯಯದಿಂದ ಕೊಟ್ಟಿಗೆಹಾರದಲ್ಲಿ ವಾರಗಳಿಂದ ನೆಟ್ವರ್ಕ್‌ ಇಲ್ಲದೆ ಜನಸಾಮಾನ್ಯರು ಪರದಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next