Advertisement

30 ವರ್ಷಗಳ ಬಳಿಕ ಗ್ರಾಮದೇವತೆ ಜಾತ್ರೆ

07:08 PM Dec 19, 2021 | Team Udayavani |

ಬಾಗಲಕೋಟೆ: ಇಲ್ಲಿಯ ಗ್ರಾಮದೇವಿ ಜಾತ್ರಾ ಮಹೋತ್ಸವ ಡಿ. 20ರಿಂದ 24ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು. 30 ವರ್ಷಗಳ ಬಳಿಕ ನಡೆಯುವ ಜಾತ್ರೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕÒ‌ ಅಶೋಕ ಲಿಂಬಾವಳಿ ಹೇಳಿದರು.

Advertisement

ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋ ತ್ಸವದ ಸಿದ್ಧತೆ ಹಾಗೂ ಪ್ರಚಾರದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್‌ ನಿಯಮಗಳ ಪಾಲನೆಯ ಮೂಲಕ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಚಿಸಲಾಗಿರುವ ಸಮಿತಿಗಳು ಸಿದ್ಧತೆಯ ಕಾರ್ಯದಲ್ಲಿ ತೊಡಗಿವೆ ಎಂದರು. ನಗರ, ದೇವಸ್ಥಾನ, ಸುತ್ತಮುತ್ತಲಿನ ಸ್ಥಳ ಸಿಂಗಾರಗೊಳಿಸಲಾಗಿದ್ದು ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಲಾಗಿದೆ. ಡಿ. 20ರಂದು ನಡೆಯುವ ಗ್ರಾಮ ದೇವಿಯರ ಭವ್ಯ ಪೂರ್ಣ ಕುಂಭ ಮೆರವಣಿಗೆಯು ಕಿಲ್ಲೆಯ ದ್ಯಾಮವ್ವದೇವಿ ದೇವಸ್ಥಾನದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾದಗಟ್ಟೆ ತಲುಪಿ ನಂತರ ದೇವಸ್ಥಾನ ತಲುಪಲಿದೆ ಎಂದರು.

ಗಂಗಾವತಿ ಪ್ರಾಣೇಶರಿಂದ ನಗೆಹಬ್ಬ: ಜಾತ್ರಾ ಮಹೋತ್ಸವದ ನಿಮಿತ್ತ ಪ್ರತಿನಿತ್ಯ ಸಂಜೆ 6ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, 21 ರಂದು ರಾತ್ರಿ 8:30 ಗಂಟೆಗೆ ಗಂಗಾವತಿ ಪ್ರಾಣೇಶ ಅವರಿಂದ ನಗೆಹಬ್ಬ, 22ರಂದು ಅನಂತ ಮಿಸ್ತ್ರಿ ಅವರಿಂದ ಭಕ್ತಿಸುಧೆ, 24ರಂದು ಸಂಗೀತ ಲಹರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರಾ ಮಹೋತ್ಸವದ ಮುನ್ನ ದಿನವಾದ ಡಿ. 19ರಂದು ಬೆಳಗ್ಗೆ 10 ಗಂಟೆಗೆ ಜೋಡೆತ್ತಿನ ಬಂಡಿ ಒಂದು ನಿಮಿಷದ ಓಟದ ಸ್ಪಧೆಯು ನಗರದ ರೇಲ್ವೆ ಗೇಟ್ ಹತ್ತಿರದ ಹಳೇ ಹೊಲ್ದೂರ ಕ್ರಾಸ್‌ದಲ್ಲಿ ಜರುಗಲಿದ್ದು, ವಿಜೇತರಿಗೆ ವಿಶೇಷ ಬಹುಮಾನ ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರಣಾಂತರಗಳಿಂದ 3 ದಶಕಗಳ ನಂತರ ಪ್ರಸಕ್ತ ವರ್ಷದಿಂದ ಶ್ರೀ ಗ್ರಾಮ ದೇವತೆಯ ಜಾತ್ರೆಗೆ ಮತ್ತೆ ಚಾಲನೆ ದೊರೆತಿದ್ದು, ಇನ್ಮುಂದೆ 3 ವರ್ಷಕ್ಕೊಮ್ಮೆ ಗ್ರಾಮ ದೇವಿ ಜಾತ್ರಾ ಮಹೋತ್ಸವ
ಆಚರಿಸಲು ಸಮಿತಿ ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷದಿಂದ ಕೋವಿಡ್‌ ನಿಯಮಗಳನ್ವಯ ನಡೆಯಲಿರುವ ಜಾತ್ರೆಯ ನಿಮಿತ್ತ ದೇವಸ್ಥಾನ, ಸುತ್ತಮುತ್ತಲೂ ಶಾಮಿಯಾನ್‌, ಬಾವುಟಗಳಿಂದ
ಅಲಂಕೃತಗೊಳಿಸಲಾಗಿದ್ದು ಧಾರ್ಮಿಕ ಕಾರ್ಯ ಕ್ರಮಗಳು ಸೇರಿದಂತೆ ರಚನಾತ್ಮಕ ಕಾರ್ಯಕ್ರಮಗಳು ಐದು ದಿನಗಳವರೆಗೆ ನಡೆಸಲು ಸಕಲ ಸಿದ್ಧತೆಗಳು ಭರದಿಂದ ಸಾಗಿದೆ ಎಂದು ತಿಳಿಸಿದರು.

ಪೂರ್ಣಕುಂಭ ಮೆರವಣಿಗೆ: 20ರಂದು ಸೋಮವಾರ ಬೆಳಗ್ಗೆ 9ಕ್ಕೆ ಕಿಲ್ಲೆಯ ದ್ಯಾಮವ್ವದೇವಿ ದೇವಸ್ಥಾನದಿಂದ ಆರಂಭವಾಗುವ ಗ್ರಾಮ ದೇವಿಯರ ಭವ್ಯ ಪೂರ್ಣಕುಂಭ ಮೆರವಣಿಗೆಯನ್ನು ಶಾಸಕ, ಬವಿವ ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದು, ಮುರನಾಳದ ಮಳೇರಾಜೇಂದ್ರ ಮಠದ ಶ್ರೀ ಜಗನ್ನಾಥ ಮಹಾಸ್ವಾಮಿಗಳು ಮಹಾಪುರುಷ, ಗುಳೇದಗುಡ್ಡದ ಕೆಂದೂರಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ,
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ವಿಧಾನ ಪರಿಷತ್ತಿನ ನೂತನ ಸದಸ್ಯ ಪಿ.ಎಚ್‌. ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಭಾಗವಹಿಸುವರು.

Advertisement

ಸೋಮವಾರ ಸಂಜೆ 7:15ಗಂಟೆಗೆ ನಡೆಯುವ ವೇದಿಕೆಯ ಕಾರ್ಯಕ್ರಮದಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಮಿತಿಯ ಗೌರವ ಅಧ್ಯಕ್ಷ, ದೇವಸ್ಥಾನದ ಬಾಬುದಾರ ಶ್ರೀಮಂತ ಬಸವಪ್ರಭು ಸರನಾಡಗೌಡ ಅಧ್ಯಕ್ಷತೆ ವಹಿಸಲಿದ್ದು ನೂತನ ಶಾಸಕ ಪಿ.ಎಚ್‌. ಪೂಜಾರ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಿಟಿಡಿಎ ಮಾಜಿ ಅಧ್ಯಕ್ಷ ಲಿಂಗರಾಜ ವಾಲಿ, ಮರಾಠಾ ಹಿತಚಿಂತಕ ಸಮಿತಿಯ ಅಧ್ಯಕ್ಷ ಡಾ| ಶೇಖರ ಮಾನೆ, ಸರಾಫ ವರ್ತಕ ಭಗವಾನದಾಸ ಬಾಶಿ, ಪತ್ರಕರ್ತ ಮಹೇಶ ಅಂಗಡಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಪ್ರಗತಿಪರ ರೈತ ಬಸಪ್ಪ ಯಳ್ಳಿಗುತ್ತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಿ. 21ರಂದು ನಡೆಯುವ ವೇದಿಕೆಯ ಕಾರ್ಯಕ್ರಮದ ಸಾನ್ನಿಧ್ಯವನ್ನು ಕೆರೂರ ಚರಂತಿಮಠದ ಡಾ| ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಗಿರಿಸಾಗರ ಕಲ್ಯಾಣ ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸುವ ಕಾರ್ಯಕ್ರಮವನ್ನು ಮಾಜಿ ಸಚಿವ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟಿಸುವರು. ಸೇವಾ ಸಮಿತಿಯ ಅಧ್ಯಕ್ಷ ಬಂಡೇರಾವ ಸರದೇಸಾಯಿ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಅತಿಥಿಗಳಾಗಿ ಕಾನಿಪ ಜಿಲ್ಲಾಧ್ಯಕ್ಷ ಸುಭಾಸ ಹೊದ್ಕೂರ, ಪ್ರಗತಿಪರ ರೈತ ಚಿನ್ನಪ್ಪ ಹಾದಿಮನಿ, ವರ್ತಕ ಮಾರುತಿರಾವ್‌ ಶಿಂಧೆ, ಬಿಜೆಪಿ ರಾಜ್ಯ ಮಹಿಳಾ ಕಾರ್ಯಕಾರಿಣಿ ಸದಸ್ಯೆ ಭಾಗೀರತಿ ಪಾಟೀಲ, ಜೀಜಾಬಾಯಿ ಮಹಿಳಾ ಮಂಡಳದ ಅಧ್ಯಕ್ಷೆ ಕಲ್ಪನಾ ಸಾವಂತ ಉಪಸ್ಥಿತರಿರುವರು.

ಡಿ. 22ರಂದು ಸಂಜೆ 7:15ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಗುಳೇದಗುಡ್ಡ ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಪ್ರಭುಸ್ವಾಮಿ ಸರಗಣಾಚಾರಿ, ಕೃಷ್ಣಾ ನಾಯಕ, ಬುಡಾ ಸದಸ್ಯ ಗುಂಡುರಾವ್‌ ಶಿಂಧೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ವರ್ತಕ ಮಹೇಶ ಅಥಣಿ, ಪತ್ರಕರ್ತ ಈಶ್ವರ ಶೆಟ್ಟರ, ಶ್ರೀ ಗ್ರಾಮದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಸುಧಾ ದೇಸಾಯಿ, ಪ್ರಗತಿಪರ ರೈತ ಬಸಪ್ಪ ಸ್ವಾಗಿ ಉಪಸ್ಥಿತರಿರುವರು.

23ರಂದು ಸಂಜೆ 7:15ಗಂಟೆಗೆ ನಡೆಯುವ ವೇದಿಕೆಯ ಕಾರ್ಯಕ್ರಮದ ಸಾನಿಧ್ಯವನ್ನು ಕೋಲ್ಹಾರ ಶ್ರೀ ದಿಗಂಬರೇಶ ಸಂಸ್ಥಾನ ಮಠದ ಜಗದ್ಗುರು ಶ್ರೀ ಕಲ್ಲಿನಾಥದೇವರು, ಮನ್ನಿಕೇರಿ ದಿಗಂಬರೇಶ್ವರ ಮಠದ ಶ್ರೀ ನಿರ್ವಾಣ ಮಹಾಸ್ವಾಮಿಗಳು, ಬಾಗಲಕೋಟೆಯ ಪಂ| ಬಿಂಧುಮಾವಾಚಾರ್ಯ ನಾಗಸಂಪಗಿ ಸಾನ್ನಿಧ್ಯ ವಹಿಸಲಿದ್ದು, ಶಿಲ್ಪಾ ಸರದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಚ್‌.ವೈ. ಮೇಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಅತಿಥಿಗಳಾಗಿ ಪತ್ರಕರ್ತ ರಾಮ
ಮನಗೂಳಿ, ವರ್ತಕರಾದ ರಾಮಕಿಶನ ಮುಂದಡಾ, ಮಹೇಶ ಅಂಗಡಿ, ಪ್ರಗತಿಪರ ರೈತರಾದ ಮಲ್ಲಪ್ಪ ಡಾವಣಗೇರಿ, ಸಂಗಣ್ಣ ದೇಸಾಯಿ, ವರ್ತಕ ಗೋವಿಂದ ಮುಳಗುಂದ, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ ಆಗಮಿಸಲಿದ್ದಾರೆ ಎಂದರು.

ಡಿ. 24ರಂದು ಸಂಜೆ 7:15ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಚರಂತಿಮಠದ ಪ್ರಭು ಸ್ವಾಮೀಜಿ, ಶ್ರೀ ಪರಮರಾಮಾರೂಢ ಸ್ವಾಮೀಜಿ, ಬಿಲ್‌ಕೆರೂರದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕಮತಗಿ ಶ್ರೀ ಹೊಳೆ ಹುಚ್ಚೇಶ್ವರ ಸ್ವಾಮೀಜಿ ವಹಿಸುವರು. ಶಾಸಕ ಡಾ| ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು. ಸಂಸದ ಪಿ.ಸಿ. ಗದ್ದಿಗೌಡರ ಪಾಲ್ಗೊಳ್ಳುವರು. ಸಮಿತಿಯ ಅಧ್ಯಕ್ಷ ಬಂಡೇರಾವ್‌ ಸರ್‌ ದೇಸಾಯಿ, ಸಂಗಯ್ಯ ಸರಗಣಾಚಾರಿ, ಸದಸ್ಯರಾದ ಸುರೇಶ ಕುದರಿಕಾರ, ಸದಾನಂದ ನಾರಾ, ಕಾಂತು ಪತ್ತಾರ, ಶ್ರೀನಾಥ ಸಜ್ಜನ, ಸಂಗಪ್ಪ ಸಜ್ಜನ, ರಮೇಶ ಕೋಟಿ, ಪರಶುರಾಮ ದಾವಣಗೇರಿ, ಅಶೋಕ ಪವಾರ, ಸುರೇಶ ಮಜ್ಜಗಿ, ಸುಧಾ ದೇಸಾಯಿ, ಶಶಿಕಲಾ ಮಜ್ಜಗಿ ಉಪಸ್ಥಿತರಿದ್ದರು.

ಗ್ರಾಮದೇವತೆ ಜಾತ್ರೆ: ದರ್ಶನಕ್ಕೆ ಮಾತ್ರ ಅವಕಾಶ
ಬಾಗಲಕೋಟೆ: ನಗರದಲ್ಲಿ ಡಿ. 20ರಿಂದ 24 ವರೆಗೆ ನಡೆಯಲಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವ ಜರುಗಲಿದ್ದು, ಕೋವಿಡ್‌-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಜಾತ್ರಾ ನಿಮಿತ್ತ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ವಿವಿಧ ರೀತಿಯ ಅಂಗಡಿ ಮುಂಗ್ಗಟ್ಟುಗಳನ್ನು ಹಾಗೂ ಜಾತ್ರೆ ನಿಮಿತ್ತ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಿ ಬಾಗಲಕೋಟೆ ತಹಶೀಲ್ದಾರ್‌ ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಗುರುಸಿದ್ದಯ್ಯ ಹಿರೇಮಠ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next