Advertisement

ಚನ್ನಗಿರಿ: ಭದ್ರಾನಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಮೃತ್ಯು

10:54 PM Jun 15, 2023 | Team Udayavani |

ಚನ್ನಗಿರಿ: ತಾಲೂಕಿನ ಹಿರೇಮಳಲ್ಲಿ ಸಮೀಪದ ಭದ್ರಾನಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

Advertisement

ತಾಲೂಕಿನ ಮಾವಿನಕಟ್ಟೆ ಗ್ರಾಮ ನಿವಾಸಿ ಅಭಿಷೇಕ್(28) ಮೃತ ದುರ್ದ್ಯೈವಿ. ಹಿರೇಮಳಲ್ಲಿ ಗ್ರಾಮ ದಲ್ಲಿ ಭದ್ರಾ ನಾಲೆಯ ಸುರಂಗ ಹಾದುಹೋಗಿದ್ದು. ಸದ್ಯ ನಾಲೆಯಲ್ಲಿ ನೀರು ಇರಲಿಲ್ಲ ಅದ್ದರಿಂದ ಮೃತ ಅಭಿಷೇಕ್ ಸುರಂಗ ನೋಡಲು ಹೋಗಿದ್ದಾಗ ಈ ವೇಳೆ ನಾಲೆಯಿಂದ ನೀರನ್ನು ಮೇಲೆತ್ತಲು ಇಟ್ಟಿದ ಮೋಟಾರ್ ನಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next