Advertisement

ಚಂದ್ರಯಾನ -2 ಹಿನ್ನಡೆಗೆ ಪಾಕಿಸ್ತಾನದ ಲೇವಡಿ

11:24 AM Sep 08, 2019 | Team Udayavani |

ಇಸ್ಲಾಮಾಬಾದ್ : ಬಾಹ್ಯಾಕಾಶ ರಂಗದಲ್ಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ಹಿನ್ನಡೆಯಾಗಿದ್ದು  ಈ ಬೆಳವಣಿಗೆಯನ್ನು ಕಂಡು ಪಾಕಿಸ್ತಾನ  ಲೇವಡಿ ಮಾಡಿದೆ.

Advertisement

“ಯಾವ ಕೆಲಸ ಬರುವುದಿಲ್ಲವೋ ಅದನ್ನು ಕೈಗೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಡಿಯರ್ ಎಂಡಿಯಾ “ ಎಂದು ಪಾಕಿಸ್ತಾನದ ವಿಜ್ಙಾನ ಮತ್ತು ತಂತ್ರಜ್ಙಾನ ಸಚಿವ ಫವಾದ್ ಹುಸೇನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಂದ್ರಯಾನ -2 ಹಿನ್ನಡೆ ಕುರಿತು ಲೇವಡಿ ಮಾಡಿದ್ದಾರೆ.

ಇಂಡಿಯಾ ಎನ್ನುವ ಬದಲು ಎಂಡಿಯಾ ಎಂದಿರುವ ಸಚಿವ, ಚಂದ್ರನಲ್ಲಿ ಇಳಿಯಬೇಕಿದ್ದ ಆಟಿಕೆ ಮುಂಬೈ ಮೇಲೆ ಬಿದ್ದಿದೆ, 900 ಕೋಟಿ ವ್ಯರ್ಥವಾಗಿ ಹೋಗಿದೆ, ಭಾರತದ ಪ್ರಧಾನಿ ರಾಜಕಾರಣಿಯಲ್ಲ, ಗಗನಯಾನಿ ಎಂದು  ಸರಣಿ ಟ್ವೀಟ್ ಗಳ ಮೂಲಕ ವ್ಯಂಗ್ಯವಾಡಿದ್ದಾರೆ .

ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ  ಸಚಿವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

 

Advertisement

 

 

 

Advertisement

Udayavani is now on Telegram. Click here to join our channel and stay updated with the latest news.

Next