Advertisement

ಹತ್ತು ತಾಸುಗಳ ಸುದೀರ್ಘ ಮೆರವಣಿಗೆ ನಂತರ ಹಿಂದೂ ಮಹಾಗಣಪತಿ ವಿಸರ್ಜನೆ

10:51 PM Oct 02, 2021 | Team Udayavani |

ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿ ಕೆರೆಯ ಸಮೀಪದ ಬಾವಿಯಲ್ಲಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.

Advertisement

ಲಕ್ಷಾಂತರ ಜನ ಸೇರುವ ಶೋಭಾಯಾತ್ರೆ‌ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಹಿಂದೂ ಮಹಾಗಣಪತಿ ಮೆರವಣಿಗೆ ಈ ವರ್ಷ ಸರಳವಾಗಿ ಮಾಡುವ ಲೆಕ್ಕಾಚಾರ ನಡೆದಿತ್ತು.

ಆದರೆ, ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು‌ ಮಾಡಿ ಸಾಗರೋಪಾದಿಯಲ್ಲಿ ಸೇರಿದ ಅಪಾರ‌ ಜನಸ್ಥೋಮದ ನಡುವೆ ಹಿಂದೂ ಮಹಾಗಣಪತಿ ವಿರಾಜಮಾನರಾಗಿ ಮೆರವಣಿಗೆಯಲ್ಲಿ ಸಾಗಿದರು‌‌.

ಇದನ್ನೂ ಓದಿ:ರೈತರ ಕಷ್ಟ ಕೇಳದ ಪ್ರಧಾನಿ ಮೋದಿ: ಡಿ.ಕೆ.ಶಿವಕುಮಾರ್‌

ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಈ ವರ್ಷ ಡಿಜೆಗಳ ಅಬ್ಬರ ಇಲ್ಲದಿದ್ದರೂ ಬರೋಬ್ಬರಿ ಐದು ಕಿ.ಮೀ ಉದ್ದದ ಮಾರ್ಗದಲ್ಲಿ ನಿರಂತರ ಹತ್ತು ಗಂಟೆಗಳ ಅವಧಿಯ ಮೆರವಣಿಗೆಯಲ್ಲಿ ಸಾಗಿಬಂದು ಚಂದ್ರವಳ್ಳಿ ಬಳಿ ಬಾವಿಯಲ್ಲಿ ವಿಸರ್ಜಿಸಲಾಯಿತು. ಈ ವೇಳೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ, ವಿಎಚ್‌ಪಿ, ಬಜರಂಗದಳ, ಸಂಘ ಪರಿವಾರ‌ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾತ್ರಿ ಹತ್ತೂವರೆ ವರೆಗೆ ಸ್ಥಳದಲ್ಲಿ ಜಮಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next