Advertisement

ಅಪಘಾತದಲ್ಲಿ ಮೃತಪಟ್ಟ ಪೊಲೀಸ್‌ ಚಂದ್ರಶೇಖರ್‌ಗೆ ಸಂತಾಪ

11:04 PM Apr 16, 2019 | sudhir |

ಕುಂದಾಪುರ: ಮಾಬುಕಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಂದಾಪುರ ಠಾಣೆಯ ಪೊಲೀಸ್‌ ಸಿಬಂದಿ ಚಂದ್ರಶೇಖರ್‌ ಅವರಿಗೆ ಇಲ್ಲಿನ ನಗರ ಠಾಣೆ ಮುಂಭಾಗ ಸಂತಾಪ ಸಲ್ಲಿಸಲಾಯಿತು.

Advertisement

ಬೆಳಗ್ಗೆ ನಗರ ಠಾಣೆಯ ಮುಂಭಾಗ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಅಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್‌.ಎಸ್‌. ಮಧುಕೇಶ್ವರ್‌, ತಹಶೀಲ್ದಾರ್‌ ವಿರೇಂದ್ರ ಬಾಡ್ಕರ್‌ ಹಾಗೂ ಉಪ ವಿಭಾಗದ ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ಗೌರವ ಸಲ್ಲಿಸಿದರು.

ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಗೃಹ ರಕ್ಷಕ ದಳದ ಕೆ.ಸಿ. ರಾಜೇಶ್‌, ನಗರ ಠಾಣೆಯ ಎಸ್‌ಐ ಹರೀಶ್‌ ಆರ್‌., ಗ್ರಾಮಾಂತರ ಠಾಣೆಯ ಎಸ್‌ಐ ಶ್ರೀಧರ್‌ ನಾಯ್ಕ, ಪೊಲೀಸ್‌ ಸಿಬಂದಿ, ಕುಟುಂಬಸ್ಥರು, ನಾಗರಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next