Advertisement

ಚಂದ್ರನಗರ : ಅಕ್ರಮ ಗೋ ವಧಾ ಕೇಂದ್ರಕ್ಕೆ ದಾಳಿ ; ಆರೋಪಿಗಳು ಪರಾರಿ

09:41 AM May 18, 2020 | sudhir |

ಕಾಪು : ಕಳತ್ತೂರು ಗ್ರಾಮದ ಚಂದ್ರನಗರ ದೇವರ ಪಾಡಿ ಎಂಬಲ್ಲಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಅಕ್ರಮ ಕಸಾಯಿಖಾನೆಗೆ ಶಿರ್ವ ಪೊಲೀಸರು ರವಿವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ.

Advertisement

ಧಾಳಿಯ ವೇಳೆ ಕಂಬಕ್ಕೆ ಕಟ್ಟಿ ಹಾಕಲಾಗಿದ್ದ ದನ ಸಹಿತವಾಗಿ 3 ದ್ವಿಚಕ್ರ ವಾಹನ, 50ರಿಂದ 60 ಕೆಜಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ಶಿರ್ವ ಪಿಎಸ್ ಐ ಶ್ರೀಶೈಲ ಮುರಗೋಡ ನೇತೃತ್ವದಲ್ಲಿ ಖಚಿತ ಮಾಹಿತಿಯ ಆಧಾರದಲ್ಲಿ ಧಾಳಿ‌ ನಡೆಸಲಾಗಿದ್ದು ಆರೋಪಿಗಳಾದ ಅಲ್ತಾಫ್ ಚಂದ್ರನಗರ, ಯಾಶೀದ್ ಚಂದ್ರನಗರ, ಆರೀಶ್ ಚಂದ್ರನಗರ ಮತ್ತು ಫಾರೂಕ್ ಚಂದ್ರನಗರ ಎಂಬವರು ಪರಾರಿಯಾಗಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ದನದ ಮಾಂಸ ಮಾಡುತಿದ್ದ ಆರೋಪಿಗಳ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next