Advertisement

ಒಂದೇ ಪಂದ್ಯಕ್ಕೆ ಚಂಡಿಮಾಲ್‌ ಖೇಲ್‌ ಖತಂ!

12:36 PM Aug 29, 2017 | Team Udayavani |

ಕೊಲಂಬೊ: ಬಹಳ ಸಮಯದ ಬಳಿಕ ಏಕದಿನ ಕ್ರಿಕೆಟಿಗೆ ಮರಳಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ ದಿನೇಶ್‌ ಚಂಡಿಮಾಲ್‌ ಅವರ ಆಟ ಒಂದೇ ಪಂದ್ಯಕ್ಕೆ ಸೀಮಿತ ಗೊಂಡಿದೆ. ಭಾರತದೆದುರಿನ ರವಿ ವಾರದ ಏಕದಿನ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೊಳಗಾದ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

Advertisement

25 ರನ್‌ ಗಳಿಸಿದ್ದ ವೇಳೆ ಹಾರ್ದಿಕ್‌ ಪಾಂಡ್ಯ ಬೌನ್ಸರ್‌ ಒಂದು ಚಂಡಿಮಾಲ್‌ ಅವರ ಬಲಗೈ ಹೆಬ್ಬೆರಳಿಗೆ ಬಡಿದಿತ್ತು. ತೀವ್ರ ನೋವಿಗೆ ಸಿಲು ಕಿದ ಅವರಿಗೆ ಅಂಗಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಬ್ಯಾಟಿಂಗ್‌ ಮುಂದುವರಿಸಿದರೂ ಬೆರಳಿನ ನೋವು ಅವರನ್ನು ಕಾಡುತ್ತಲೇ ಇತ್ತು. ಶಾರ್ಟ್‌ ಬಾಲ್‌ಗ‌ಳನ್ನು ಎದುರಿಸಲು ಪರದಾಡುತ್ತಿದ್ದುದು ಕಂಡುಬಂತು. ಒಟ್ಟು 71 ಎಸೆತ ಎದುರಿಸಿದ ಚಂಡಿಮಾಲ್‌ 36 ರನ್‌ ಮಾಡಿ ಔಟಾದರು.

ಚಂಡಿಮಾಲ್‌ ಹೆಬ್ಬೆರಳಿನ ಮೂಳೆಯಲ್ಲಿ ಅತಿ ಸೂಕ್ಷ್ಮ ಬಿರುಕು ಕಂಡುಬಂದಿದ್ದು, ಅವರು ಉಳಿ ದೆರಡು ಪಂದ್ಯಗಳಿಗೆ ಲಭ್ಯರಿಲ್ಲ ಎಂಬುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಸೋಮವಾರ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಚಂಡಿಮಾಲ್‌ ಹೊರಗುಳಿಯುವುದ ರೊಂದಿಗೆ ಶ್ರೀಲಂಕಾ ಕ್ರಿಕೆಟಿಗರ ಗಾಯದ ಸಮಸ್ಯೆ ಉಲ್ಬಣಿಸಿದಂತಾಗಿದೆ. ಗುಣರತ್ನೆ, ಪ್ರದೀಪ್‌, ಹೆರಾತ್‌, ಗುಣತಿಲಕ ಅವರೆಲ್ಲ ಈಗಾ ಗಲೇ ಗಾಯಾಳಾಗಿ ಹೊರಬಿದ್ದಿದ್ದಾರೆ. ಚಂಡಿ ಮಾಲ್‌ ಗಾಯಾಳು ಗುಣತಿಲಕೆ ಬದಲು 3ನೇ ಏಕದಿನದ ವೇಳೆ ತಂಡವನ್ನು ಸೇರಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next