Advertisement

ಫಿಕ್ಕಿ ಕಾರ್ಯಕ್ರಮದಿಂದ ದೂರ ಉಳಿದ ಚಂದಾ

09:20 AM Apr 04, 2018 | Team Udayavani |

ಹೊಸದಿಲ್ಲಿ: ಕೈಗಾರಿಕಾ ಸಂಘಟನೆ ಫಿಕ್ಕಿ ಆಯೋಜಿಸಿರುವ ಕಾರ್ಯಕ್ರಮದಿಂದ ದೂರ ಉಳಿಯಲು ಐಸಿಐಸಿಐ ಬ್ಯಾಂಕ್‌ ಎಂ.ಡಿ. ಮತ್ತು ಸಿ.ಇ.ಒ. ಚಂದಾ ಕೊಚ್ಚಾರ್‌ ನಿರ್ಧರಿಸಿದ್ದಾರೆ. ವಿಡಿಯೋಕಾನ್‌ ಗ್ರೂಪ್‌ಗೆ ನಿಯಮ ಮೀರಿ ಸಾಲ ನೀಡಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಫಿಕ್ಕಿಯ ಲೇಡೀಸ್‌ ಆರ್ಗನೈಸೇಷನ್‌, ಏ.5ರಂದು ಅವರಿಗೆ ಸನ್ಮಾನ ಏರ್ಪಡಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಇತರ ಗಣ್ಯರು ಅದರಲ್ಲಿ ಭಾಗವಹಿಸುತ್ತಿದ್ದಾರೆ. ಚಂದಾ ಕೊಚ್ಚಾರ್‌ ನಿರ್ಧಾರದ ಹಿನ್ನೆಲೆಯಲ್ಲಿ ಗಣ್ಯರೆಲ್ಲರಿಗೆ ಪರಿಷ್ಕೃತ ಆಹ್ವಾನ ಕಳುಹಿಸಲಾಗಿದ್ದು, ಅದರಲ್ಲಿ ಅವರ ಹೆಸರು ಮುದ್ರಿತವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next