Advertisement

ಹಂಗಾಮಿ ಸಭಾಪತಿ v/s ಸಭಾಪತಿ ಅಧಿಕಾರ; ಕಲಾಪದಲ್ಲಿ ಗಂಭೀರ ಚರ್ಚೆ

01:37 PM Jul 06, 2018 | Team Udayavani |

ಬೆಂಗಳೂರು:ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿಯರಿಗೆ ಸದನ ನಡೆಸುವ ಅಧಿಕಾರವಿಲ್ಲ. ಅವರು ಮೊದಲು ಸಭಾಪತಿ ಚುನಾವಣೆ ನಡೆಸಬೇಕಿತ್ತು ಎಂಬುದಾಗಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು ಶುಕ್ರವಾರ ವಿಧಾನಪರಿಷತ್ ನಲ್ಲಿ ಪ್ರಶ್ನೆ ಎತ್ತಿದ ಪ್ರಸಂಗ ನಡೆಯಿತು.

Advertisement

ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಪ್ರಶ್ನಿಸಿದ ಆಯನೂರು, ಈವರೆಗೂ ಯಾಕೆ ಸಭಾಪತಿ ಚುನಾವಣೆ ನಡೆಸಿಲ್ಲ ಎಂದರು. ಅಧಿವೇಶನದೊಳಗೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು.

ಸದನದ ಒಪ್ಪಿಗೆ ಇಲ್ಲದಿದ್ದರೆ ಈ ಕ್ಷಣ ಪೀಠದಿಂದ ಕೆಳಗಿಳಿಯುವೆ:

ಹಂಗಾಮಿ ಸಭಾಪತಿ ಸದನ ನಡೆಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಅಧಿವೇಶನದ ಮೊದಲ ದಿನವೇ ಪ್ರಶ್ನೆ ಎತ್ತಬೇಕಾಗಿತ್ತು. ಒಂದು ವೇಳೆ ಸದನದ ಒಪ್ಪಿಗೆ ಇಲ್ಲದಿದ್ದರೆ ನಾನು ಒಂದು ಕ್ಷಣವೂ ಸಭಾಪತಿ ಪೀಠದಲ್ಲಿ ಮುಂದುವರಿಯಲಾರೆ ಎಂದು ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದರು.

ಅವಕಾಶ ಇದೆ; ಸಚಿವ ಕೃಷ್ಣಭರೇಗೌಡ

Advertisement

ಹಂಗಾಮಿ ಸಭಾಪತಿಯವರಿಗೆ ಕಲಾಪ ನಡೆಸುವ ಅಧಿಕಾರವಿಲ್ಲ ಎಂಬ ಬಿಜೆಪಿಯ ಪ್ರಶ್ನೆ ಕಲಾಪದಲ್ಲಿ ಕೆಲಕಾಲ ಗಂಭೀರ ಚರ್ಚೆಗೆ ಕಾರಣವಾಯಿತು. ಬಳಿಕ ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸಂವಿಧಾನ ಹಾಗೂ ರಾಜ್ಯಪಾಲರ ಆದೇಶದ ಪ್ರಕಾರ, ಸಭಾಪತಿಯಾಗಿರುವ ಹೊರಟ್ಟಿಯವರಿಗೆ ಸದನ ನಡೆಸುವ ಅಧಿಕಾರವಿದೆ. ರಾಜ್ಯಪಾಲರ ಆದೇಶದಲ್ಲಿ ಹಂಗಾಮಿ ಪದ ಬಳಸಿಲ್ಲ. ಅಲ್ಲದೇ ಚುನಾವಣೆಯಾಗುವವರೆಗೂ ಹೊರಟ್ಟಿಯವರೇ ಸಭಾಪತಿಯಾಗಿ ಮುಂದುವರಿಯಲಿದ್ದಾರೆ.ಕೂಡಲೇ ಸಭಾಪತಿ ಚುನಾವಣೆ ನಡೆಸುವುದಾಗಿಯೂ ಸ್ಪಷ್ಟನೆ ನೀಡಿದರು.

ಹೊಂದಾಣಿಕೆ ಇಲ್ಲವೋ ಹೇಗೆ? ತೇಜಸ್ವನಿ ರಮೇಶ್

ಸರ್ಕಾರಕ್ಕೆ ಸಭಾಪತಿ ಆಯ್ಕೆ ಬಗ್ಗೆ ಇಚ್ಛಾ ಶಕ್ತಿ ಇಲ್ಲವೋ ಅಥವಾ ಹೊಂದಾಣಿಕೆ ಇಲ್ಲವೋ ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್ ಪ್ರಶ್ನಿಸಿದರು. ಹಿರಿಯರಾದ ಹೊರಟ್ಟಿಯವರೇ ನೀವು ಇಲ್ಲಿ ಕುಳಿತು ಮಾತನಾಡಬೇಕಿತ್ತು. ಹೀಗಾಗಿ ಪೀಠವನ್ನು ಹಂಗಾಮಿ ಅನ್ನೋದರಿಂದ ತೆರವುಗೊಳಿಸಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next