Advertisement
ಅವರು ಶುಕ್ರವಾರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಹಾಗೂ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಿತ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ 1,330ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಮಡಂತ್ಯಾರು ಚರ್ಚ್ನ ಧರ್ಮ ಗುರು ವಂ| ಬಾಸಿಲ್ ವಾಸ್ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ ಮದ್ಯ ವ್ಯವಸನಿ ಗಳು ದೃಢ ನಿರ್ಧಾರ ಕೈಗೊಂಡು ವ್ಯಸನ ಮುಕ್ತರಾದರೆ ಅವರಿಗೆ ಇದರಿಂದ ಹೊಸ ಜೀವನ ಪ್ರಾಪ್ತವಾಗುತ್ತದೆ. ಡಾ| ಹೆಗ್ಗಡೆ ಯವರ ಕಲ್ಪನೆಯ ಯಶಸ್ಸಿಗೆ ಅವರ ತಂಡದ ಕಾರ್ಯ ಶ್ಲಾಘನೀಯ ಎಂದರು.
Related Articles
ಮನುಷ್ಯ ತಾನು ಮಾಡುವ ತಪ್ಪಿನಿಂದ ಆಯುಷ್ಯ ಕಳೆದುಕೊಳ್ಳುತ್ತಿದ್ದು, ವ್ಯಸನಿಗಳ ಭವಿಷ್ಯದಲ್ಲಿ ಹೊಸ ಬದುಕು ಬರಲಿದೆ ಎಂದು ಬರೆದಿಟ್ಟ ಕಾರಣದಿಂದಲೇ ಇಂತಹ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ. ಇಲ್ಲಿ ಅವರ ಮನಸ್ಸನ್ನು ಪರಿವರ್ತನೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ದುಡಿಯುವವರು ಇನ್ನೊಬ್ಬರ ಬದುಕಿನಲ್ಲಿ ಸಂತೋಷವನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ
Advertisement