Advertisement

Rain Update: ಜುಲೈಯಲ್ಲಿ ಉತ್ತಮ ಮಳೆ ಸಾಧ್ಯತೆ

11:17 PM Jul 02, 2023 | Team Udayavani |

ಮಣಿಪಾಲ: ಮುಂಗಾರು ವಿಳಂಬ ವಾಗಿ ಆರಂಭವಾಗಿ ಜೂನ್‌ ತಿಂಗಳಿಡೀ ನಿರೀಕ್ಷಿತ ಮಳೆ ಸುರಿಯದಿದ್ದರೂ ಜುಲೈಯಲ್ಲಿ ನಿರೀಕ್ಷೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ ಜು. 4ರಿಂದ ಮೂರು ದಿನಗಳ ಕಾಲ ಉತ್ತಮ ಮಳೆಯ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ ಎಂಬುದಾಗಿ ಭಾರ ತೀಯ ಹವಾಮಾನ ಇಲಾಖೆ (ಐಎಂಡಿ)ಯ ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಈ ತಿಂಗಳಿಡೀ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಜು. 4ರಿಂದ ಮುಂದಿನ ಒಂದು ವಾರ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಜು. 6ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಮಳೆ ಬಿರುಸು
ಹವಾಮಾನ ಮುನ್ಸೂಚನೆಗೆ ಪೂರಕ ಎಂಬಂತೆ ರವಿವಾರ ಸಂಜೆಯ ಬಳಿಕ ಕರಾವಳಿಯಾದ್ಯಂತ ಮಳೆ ಚುರುಕಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿರುವುದು ಭರವಸೆ ಮೂಡಿಸಿದೆ. ವೈಜ್ಞಾ ನಿಕ ಹವಾಮಾನ ಮುನ್ಸೂಚನೆಗೆ ಪೂರಕವಾಗಿ ಜು. 6ರಂದು ಇನ್ನೊಂದು ಮಹಾಮಳೆ ನಕ್ಷತ್ರ ಪುನರ್ವಸು ಕೂಡ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next