Advertisement

Chamarajanagara; ಹೆಲ್ಮೆಟ್‌ ಖರೀದಿಸಿ ತಂದರೆ ಮಾತ್ರ ಬೈಕ್‌ ವಾಪಸ್‌!

12:02 AM Aug 14, 2024 | Team Udayavani |

ಚಾಮರಾಜನಗರ: ಹೆಲ್ಮೆಟ್‌ ಧರಿಸದಿದ್ದರೆ ಬೈಕ್‌ ಸವಾರರಿಗೆ ದಂಡ ವಿಧಿಸುವುದು ಸಾಮಾನ್ಯ. ಆದರೆ ಚಾಮರಾಜನಗರ ಎಸ್ಪಿ ಡಾ| ಕವಿತಾ ಅವರು ಹೆಲ್ಮೆಟ್‌ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಸವಾರರ ಬೈಕ್‌ ವಶಪಡಿಸಿಕೊಂಡು ಹೆಲ್ಮೆಟ್‌ ಖರೀದಿಸಿ ತಂದು ತೋರಿಸಿ, ನಿಮ್ಮ ಬೈಕ್‌ ತೆಗೆದುಕೊಂಡು ಹೋಗಿ ಹೇಳುವ ಮೂಲಕ ವಿನೂತನ ಕಾರ್ಯಾಚರಣೆ ನಡೆಸಿದರು.

Advertisement

ಹೆಲ್ಮೆಟ್‌ ರಹಿತ ಚಾಲನೆ ಎಷ್ಟು ಅಪಾಯಕಾರಿ ಎಂದು ಮನದಟ್ಟು ಮಾಡಿಸಲು, ರಸ್ತೆ ಅಪಘಾತದಲ್ಲಿ ಬಿದ್ದು ಹೆಲ್ಮೆಟ್‌ ಧರಿಸದೇ ಮೃತಪಟ್ಟವರ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಿದರು. ಕಳೆದ ಜುಲೈಯಲ್ಲಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ  15 ಮಂದಿ ಬೈಕ್‌ ಸವಾರರು ಯಾರೂ ಹೆಲ್ಮೆಟ್‌ ಧರಿಸಿರಲಿಲ್ಲ. ತಲೆಗೆ ಮಾತ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next