Advertisement

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

11:21 AM Apr 25, 2024 | Team Udayavani |

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ. ಆರ್. ಕೃಷ್ಣಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರು ಟೈರ್ ಸಿಡಿದು ಅಪಘಾತಕ್ಕೀಡಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

Advertisement

ಶಾಸಕ ಎ ಆರ್ ಕೃಷ್ಣಮೂರ್ತಿ, ಅವರ ಆಪ್ತ ಸಹಾಯಕ ಚೇತನ್ ಹಾಗೂ ಚಾಲಕ ಸತೀಶ್ ಕಾರಿನಲ್ಲಿದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.

ಎ ಅರ್ ಕೆ ಅವರು ಬುಧವಾರ ರಾತ್ರಿ ಕೊಳ್ಳೇಗಾಲದಿಂದ ಮೈಸೂರಿಗೆ ತಿ. ನರಸೀಪುರ ಮಾರ್ಗ ತೆರಳುತ್ತಿದ್ದರು. ನಾಡನಹಳ್ಳಿ ಬಳಿ ಕಾರಿನ ಟೈರ್ ಸಿಡಿದಿದೆ. ಆಗ ಕಾರು ಅಡ್ಡಾದಿಡ್ಡಿ ಚಲಿಸಿ ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದೆ. ರಸ್ತೆ ಬದಿ ಸಣ್ಣ ಬಂಡೆಗಳಿದ್ದುದರಿಂದ ಕಾರು ಉರುಳಿ ಬೀಳದಂತೆ ರಕ್ಷಿಸಿದೆ.

ಕಾರು ಎ ಆರ್ ಕೆ ಅವರ ಪುತ್ರನ ಗೆಳೆಯನದ್ದಾಗಿದ್ದು, ಹಿಂದೆ ಎ ಆರ್ ಕೆ ಅವರ ಕಾರು ಬರುತ್ತಿತ್ತು. ಆ ಕಾರಿನಲ್ಲಿ ಮೈಸೂರಿನ‌ ಮನೆಗೆ ತಲುಪಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು, ದೇವರ ದಯೆಯಿಂದ ಅಪಾಯದಿಂದ ಪಾರಾಗಿದ್ದೇವೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next