Advertisement

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

09:30 PM Apr 18, 2024 | Team Udayavani |

ಕೊಳ್ಳೇಗಾಲ: ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಗುಂಡಿಮಾಳ ಸಮೀಪ ನಡೆದಿದೆ.

Advertisement

ಹೊಸಪೋಡು ಗ್ರಾಮದ ಆದಿವಾಸಿ ಜನಾಂಗದ ಈರ (61) ಮೃತ ವ್ಯಕ್ತಿ. ಬುಧವಾರ ಕೆಲಸದ ಮೇಲೆ ಒಡೆಯರಪಾಳ್ಯಕ್ಕೆ ಆಗಮಿಸಿ ಮತ್ತೆ ಸ್ವಗ್ರಾಮ ಹೊಸಪೋಡಿಗೆ ತೆರಳಲು ಗುಂಡಿಮಾಳದ ಹತ್ತಿರ ಹೋಗುವಾಗ ಒಂಟಿ ಸಲಗ ದಾಳಿ ನಡೆಸಿದ ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬುಧವಾರ ಮನೆ ಬಿಟ್ಟು ಹೋದ ಈರ ಮನೆಗೆ ಬಾರದ ಹಿನ್ನಲೆಯಲ್ಲಿ ಈತನನ್ನು ಹುಡುಕುವಾಗ ಗುಂಡಿಮಾಳದ ಸಮೀಪ ಆನೆ ದಾಳಿಯಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಮೇರೆಗೆ ಬಿ.ಆರ್.ಟಿ.ಅರಣ್ಯ ವಿಭಾಗದ ಡಿ.ಎಫ್.ಒ. ದೀಪಾ ಜೆ.ಕಾಂಟ್ರೆಕ್ಟ್, ಆರ್.ಎಫ್. ಒ. ಪ್ರಮೋದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಡಿವಾಣಕ್ಕೆ ಒತ್ತಾಯ
ಇತ್ತೀಚಿಗೆ ಈ ಭಾಗದಲ್ಲಿಯೇ ಆದಿವಾಸಿ ವ್ಯಕ್ತಿಯೋರ್ವ ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಇದೇ ಮಾದರಿಯಲ್ಲಿಯೇ ಮತ್ತೊರ್ವ ವ್ಯಕ್ತಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟವರು ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಕಾಡಾನೆ ದಾಳಿಯನ್ನು ತಡೆಗಟ್ಟಬೇಕೆಂದು ರೈತರು, ಆದಿವಾಸಿ ಮುಖಂಡರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next