Advertisement

Chamarajanagar: ಚಲಿಸುತ್ತಿದ್ದ ಬಸ್ ಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

08:23 PM Nov 15, 2023 | Team Udayavani |

ಚಾಮರಾಜನಗರ: ಚಲಿಸುತ್ತಿರುವ ಬಸ್ ಗೆ ತಲೆ ಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಬುಧವಾರ ನಡೆದಿದೆ.ಚಾಮರಾಜನಗರ ತಾಲೂಕು ಯಲಕ್ಕೂರು ಗ್ರಾಮದ ರಂಗಸ್ವಾಮಿ (34) ಮೃತ ವ್ಯಕ್ತಿ.

Advertisement

ಸಿ.ಸಿ. ಟಿವಿ ಯಲ್ಲಿ ಆತ್ಮಹತ್ಯೆ ದೃಶ್ಯ ಸೆರೆಯಾಗಿದೆ. ಚಲಿಸುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್‌ನ ಹಿಂದಿನ ಚಕ್ರದಡಿಗೆ ರಂಗಸ್ವಾಮಿ‌ ಜಿಗಿದಿದ್ದಾರೆ.‌ ಅವರ ಮೇಲೆ ಬಸ್ ನ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಮೃತ ದೇಹವನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next