Advertisement
ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಮುಖ್ಯ ರಸ್ತೆತಲ್ಲೂರು-ನೇರಳಕಟ್ಟೆ, ನೆಂಪು ಹಾಗೂ ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಾಗುವ ಮುಖ್ಯ ರಸ್ತೆ ಇದಾಗಿದೆ. ಹೆಮ್ಮಾಡಿಯಿಂದ ವಂಡ್ಸೆ ತನಕ ರಸ್ತೆ ಸಂಪೂರ್ಣವಾಗಿ ಡಾಮರುಗೊಂಡಿದೆ. ಆದರೆ ಚಿತ್ತೂರಿನಿಂದ ಇಡೂರು ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ದಾರಿಯಲ್ಲಿ ಬಹುತೇಕ ಕಡೆ ಭಾರೀ ಹೊಂಡ ಉಂಟಾಗಿದ್ದು, ಘನವಾಹನ ಸಹಿತ ದ್ವಿಚಕ್ರ ವಾಹನದಲ್ಲಿ ಸಾಗುವವರು ಆಯತಪ್ಪಿದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
Related Articles
ಅನೇಕ ಕಡೆಯಲ್ಲಿ ಹೊಂಡವಾಗಿರುವ ಚಿತ್ತೂರು, ಈಡೂರು ಜಡ್ಕಲ್ ಮಾರ್ಗ ದ ಮುಖ್ಯ ರಸ್ತೆಯನ್ನು ಡಾಮರುಗೊಳಿಸದಿದ್ದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಇಡೂರು ನಿವಾಸಿಗಳು ಆಗ್ರಹಿಸಿದ್ದಾರೆ.
Advertisement
ಮಳೆ ಕಾಮಗಾರಿಗೆ ಅಡಚಣೆಯಾಗಿದೆಚಿತ್ತೂರಿನಿಂದ ಮುಂದೆ ಸಾಗುವ ರಾ. ಹೆದ್ದಾರಿಯ ಮುಖ್ಯ ರಸ್ತೆಯ ಡಾಮರಿಗೆ ಮಳೆ ಅಡ್ಡಿಯಾಗಿರುವುದರಿಂದ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಮಳೆ ಮುಗಿದೊಡನೆ ಡಾಮರು ಕಾಮಗಾರಿ ಮುಂದುವರಿಸಲಾಗುವುದು.
-ದುರ್ಗಾದಾಸ್,
ಲೋಕೋಪಯೋಗಿ ಇಲಾಖೆ ಎಂಜಿನಿಯರ್