Advertisement

ಲಂಚ ಪಡೆಯುತ್ತಿದ್ದ ಚಳ್ಳಕೆರೆ ತಾ.ಪಂ ಇಒ ಎಸಿಬಿ‌ ಬಲೆಗೆ

07:57 AM Mar 13, 2021 | Team Udayavani |

ಚಿತ್ರದುರ್ಗ: ಪಿಡಿಒ ಒಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಚಳ್ಳಕೆರೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ   ಶ್ರೀಧರ್ ಐ ಬಾರಿಕೇರ್ ಎಸಿಬಿ‌ ಬಲೆಗೆ ಬಿದ್ದಿದ್ದಾರೆ.

Advertisement

ತಾಲೂಕಿನ ಬೆಳಗೆರೆ ಪಿಡಿಒ ಗುಂಡಪ್ಪ ಅವರಿಂದ ಕಾರ್ಯಯೋಜಿತ ಮಂಜೂರಾತಿಗಾಗಿ ತಾಲೂಕು ಪಂಚಾಯತಿ ಬಳಿ 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಎಥೆನಾಲ್‌ ಕುಡಿಸಿ, ಗಾಡಿ ಓಡಿಸಿ! ಪೆಟ್ರೋಲ್‌, ಡೀಸೆಲ್‌ ಬೇಡಿಕೆ ಕುಗ್ಗಿಸಲು ಮುಂದಾದ ಕೇಂದ್ರ

ಎಸಿಬಿ ಎಸ್ಪಿ  ಜಯಪ್ರಕಾಶ  ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ  ಬಸವರಾಜ್  ಮಗುದಮ್,  ಪಿಐಗಳಾದ ಪ್ರವೀಣ್ ಕುಮಾರ್, ಆಂಜನೇಯ ಡಿ.ಎಸ್.ಹರೀಶ ಮಾರುತಿ, ಯತಿರಾಜ್ ಓಬಣ್ಣ, ಫಕ್ರುದ್ದಿನ್ ಪಾಯಾಜ್, ಪ್ರಭಾಕರ್,  ಶ್ರೀಪತಿ ಮತ್ತಿತರರಿದ್ದರು.

ಇದನ್ನೂ ಓದಿ:ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಬೆಳ್ತಂಗಡಿಯ ಬಂದಾರು ಗ್ರಾಮ ಪಂಚಾಯತ್ ಆಯ್ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next