Advertisement

ಹೊಸ ವಿವಾದಕ್ಕೆ ಕಾರಣವಾಯಿತು ಚಡ್ಡಿಸುಡುವ ಅಭಿಯಾನ: ಸಿದ್ದರಾಮಯ್ಯ ವಿರುದ್ಧ ದೂರು

02:18 PM Jun 17, 2022 | Team Udayavani |

 ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ‌ ಮುಖಂಡ ಛಲವಾದಿ ನಾರಾಯಣಸ್ವಾಮಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

Advertisement

ತಲೆಯ ಮೇಲೆ ಚಡ್ಡಿ‌ಹೊತ್ತು ಸಿದ್ದರಾಮಯ್ಯ ಮನೆ‌ ಮುಂದೆ ಪ್ರತಿಭಟನೆ ನಡೆಸಿದ್ದ ನಾರಾಯಣಸ್ವಾಮಿ ವಿರುದ್ಧ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಆರ್ ಎಸ್ಎಸ್ ಚಡ್ಡಿ‌ಹೊರುವ ಕೆಲಸವನ್ನು ದಲಿತರಿಗೆ ನೀಡಿದೆ, ಪಠ್ಯ ಪರಿಷ್ಕರಣೆ ಹೊಣೆಯನ್ನು ಚಕ್ರತೀರ್ಥ ಅವರಿಗೆ ನೀಡಿದೆ. ನಾರಯಣ ಸ್ವಾಮಿಯವರೇ ಗುಲಾಮಿ ಮನಸ್ಥಿತಿಯಿಂದ ಹೊರಬನ್ನಿ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:ಮೋದಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ; ಡಾ. ಕೆ. ಲಕ್ಷ್ಮಣ್‌

ಈ ಹೇಳಿಕೆಯಿಂದ ಕೆರಳಿದ್ದ ನಾರಾಯಣಸ್ವಾಮಿ ಅವರು, ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಆರೋಪಿಸಿದ್ದರು. ಈಗ ಮುಂದುವರಿದು ಸಿದ್ದರಾಮಯ್ಯ ವಿರುದ್ಧ ದಲಿತ ದೌರ್ಜನ್ಯ ಪ್ರಕರಣವನ್ನು ಬೆಂಗಳೂರಿನಲ್ಲಿ ದಾಖಲಿಸಿದ್ದಾರೆ‌. ಇದು ಹೊಸ ರಾಜಕೀಯ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next