Advertisement

ದೀಪಕ್‌ ಮನೆಗೆ ಚರ್ಕವರ್ತಿ, ಪ್ರಥಮ್‌ ಭೇಟಿ ಸಾಂತ್ವನ 

12:03 PM Jan 07, 2018 | Team Udayavani |

ಮಂಗಳೂರು: ದುಷ್ಕರ್ಮಿಗಳ ದಾಳಿಗೊಳಗಾಗಿ  ಹತ್ಯೆಗೀಡಾಗಿದ್ದ ದೀಪಕ್‌ ರಾವ್‌ ಅವರ ಮನೆಗೆ ಭಾನುವಾರ ಚಿಂತಕ,ವಾಗ್ಮಿ ಚರ್ಕವರ್ತಿ ಸೂಲಿಬೆಲೆ ಮತ್ತು ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

Advertisement

ಚಕ್ರವರ್ತಿ ಅವರು ದೀಪಕ್‌ ಅವರ ತಾಯಿ ಪ್ರೇಮಲತಾ ಅವರೊಂದಿಗೆ ಕೆಲ ಕಾಲ ಮಾತನಾಡಿ ಸಾಂತ್ವನ ಹೇಳಿದರು. 

ಪ್ರಥಮ್‌ ವೈಯಕ್ತಿಕವಾಗಿ  25 ಸಾವಿರ ರೂಪಾಯಿ ಸಹಾಯಧನ ವಿತರಿಸಿದರು. 

Advertisement

ಭೇಟಿ ಮಾಡಿ  ಹೊರ ಬಂದ ಬಳಿಕ ಕಿಡಿ ಕಾರಿದ ಪ್ರಥಮ್‌ ‘ಮಂಗಳೂರನ್ನು ಯಾಕೆ ಕ್ಲೀನ್‌ ಸಿಟಿ ಎನ್ನುತ್ತೀರಿ ಇಲ್ಲಿ ನೆತ್ತರು ಹರಿದು ಕೆಂಪಾಗಿದೆ.ಇದು ಕ್ಲೀನ್‌ ಸಿಟಿಯೇ’ ಎಂದು ಪ್ರಶ್ನಿಸಿದರು. 

‘ಸಚಿವ ಖಾದರ್‌ ವಿರುದ್ಧ ಕಿಡಿ ಕಾರಿ ಅವರು ಕೆಲ  ಆರೋಪಿಗಳ ಜೊತೆ ಇರುವ ಫೋಟೋಗಳು ಹರಿದಾಡುತ್ತಿವೆ. ಎಲ್ಲರೂ ಕೇಳಿದಂತೆ ನಾನು ಅವರ ರಾಜೀನಾಮೆ ಕೇಳುವುದಿಲ್ಲ. ಅವರು ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತೇನೆ’ ಎಂದರು.

‘ನೀವು ಮಂಗಳೂರಿನ ಐಶ್ವರ್ಯಾ ರೈ ಅವರನ್ನು ದೊಡ್ಡ ಸಾಧಕಿಯನ್ನಾಗಿಸಿದಿರಿ, ಇನ್ನೋರ್ವ ರೈ ಜಿಲ್ಲೆಯಲ್ಲಿ ತುಷ್ಟೀಕರಣ ಮಾಡುತ್ತಿದ್ದಾರೆ.ಹಿಂಗೂಗಳ ರಕ್ತ ಹಸಿರಲ್ಲ ಅದೂ ಕೆಂಪು’ಎಂದು  ರಮನಾಥ ರೈ ವಿರುದ್ಧ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next