Advertisement

ರೋಣ; ಚೈತನ್ಯ ರಥಯಾತ್ರೆಗೆ ಅದ್ಧೂರಿ ಸ್ವಾಗತ

06:42 PM Feb 09, 2021 | Team Udayavani |

ರೋಣ: ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ನಿರಂತರ  ಅನ್ಯಾಯ ಕ್ಕೊಳಗಾಗುತ್ತಿದೆ. ಆದ್ದರಿಂದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸದಾಶಿವ ಆಯೋಗ ವರದಿ ಅನುಷ್ಠಾನಗೊಳ್ಳಬೇಕು ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಪ್ರಕಾಶ ಹೊಸಳ್ಳಿ ಆಗ್ರಹಿಸಿದರು.

Advertisement

ಪಟ್ಟಣಕ್ಕೆ ಆಗಮಿಸಿದ ಮಾದಿಗರ ಚೈತನ್ಯ ರಥ ಯಾತ್ರೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ನ್ಯಾ| ಸದಾಶಿವ ಆಯೋಗ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 8 ವರ್ಷ ಗತಿಸುತ್ತ ಬಂದಿದೆ. ವರದಿ ಅನುಷ್ಠಾನಕ್ಕೆ ಮಾದಿಗ ಜನಾಂಗ ನಿರಂತರ ಹೋರಾಡುತ್ತಿದೆ. ಆದರೆ ಸರ್ಕಾರ ಮಾತ್ರ ಉದಾಸೀನತೆ ತೋರುತ್ತಿದೆ. ಕೂಡಲೇ ವರದಿ ಯಥಾವತ್‌ ಜಾರಿಯಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಇದನ್ನು ಓದಿ :

ಯಾತ್ರೆಗೆ ಭವ್ಯ ಸ್ವಾಗತ: ನವಲಗುಂದ ಮಾರ್ಗವಾಗಿ ರೋಣ ಪಟ್ಟಣಕ್ಕೆ ಆಗಮಿಸಿದ ಮಾದಿಗ ಚೈತನ್ಯ  ರಥಯಾತ್ರೆಗೆ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಡೊಳ್ಳು, ಕಲಾ ತಂಡಗಳ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ ಹೆಣ್ಣೂರು ಲಕೀÒ$¾ನಾರಾಯಣ, ಅಂಬಣ್ಣ ಅರೋಲಿಕರ, ನಾಗರಾಜ ಗುಟ್ಟಳ್ಳಿ, ರಾಮಚಂದ್ರ ಕಾಂಬಳೆ,  ನಾಗರಾಜ ಕೋಡಿಗೆಹಳ್ಳಿ, ಎನ್‌. ವೆಂಕಟೇಶ್‌ ಹೊಸಕೋಟೆ, ಎನ್‌. ಕುಮಾರ್‌ ಹೊಸಕೋಟೆ, ಕೆ.ದೇವರಾಜ್‌ ಹೊಸಕೋಟೆ, ಹರೀಶ್‌ ಗುಟ್ಟಳ್ಳಿ, ರಂಗರಾಜಣ್ಣ, ವೆಂಕಟ ರಮಣಸ್ವಾಮಿ, ರಾಮದಾಸ್‌ ಪೂಜಾರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next