Advertisement

ನ್ಯೂಟನ್‌ ನಿಯಮ ಭಾರತೀಯ ಸಿದ್ಧಾಂತದ ನಕಲು!

04:11 PM Jul 15, 2022 | Team Udayavani |

ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೇಮಕ ಮಾಡಿದ್ದ  ಕಾರ್ಯಪಡೆಯು ಕೇಂದ್ರ ಸರಕಾರಕ್ಕೆ “ನಿಲುವು ಪತ್ರ’ ನೀಡಿದ್ದು, ಇದರಲ್ಲಿ ಭಾರತ ಮತ್ತು ಭಾರತೀಯತೆಯ ಬಗ್ಗೆ  ಪ್ರಸ್ತಾವಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಪ್ರಪಂಚಕ್ಕೆ ವೇದ, ಯೋಗ ಮತ್ತು ತತ್ವ್ತ ಶಾಸ್ತ್ರದ ಕೊಡುಗೆಯ ಬಗ್ಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪಡೆಯ ಅಧ್ಯಕ್ಷ, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ಅವರು ಉದಯವಾಣಿ ಜತೆಗೆ ಮಾತನಾಡಿದ್ದಾರೆ.

Advertisement

ಎನ್‌ಇಪಿಯಲ್ಲಿ ರಾಜ್ಯಭಾಷೆ, ಮಾತೃಭಾಷೆ, ಮನೆ ಭಾಷೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನು ನೀಡಲಾಗಿದೆ. ಈಗ ಸಮಸ್ಯೆಯಾಗಿರುವುದು ಮಾಧ್ಯಮ ವಲ್ಲ, ಶಿಕ್ಷಣದ ಗುಣಮಟ್ಟ. ಹಿಂದೆ 5ನೇ ತರಗತಿಯ ಅನಂತರ ಇಂಗ್ಲಿಷ್‌ ಕಲಿಸಿದರೂ ಚೆನ್ನಾಗಿ ಕಲಿಸ ಲಾಗುತ್ತಿತ್ತು. ಇದಕ್ಕಾಗಿ ಗುಣಮಟ್ಟದ ಶಿಕ್ಷಕರು ಆವಶ್ಯಕ. ಇದನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬ ಬಗ್ಗೆ ಸಲಹೆ ಸೂಚನೆ ಗಳನ್ನು ಸ್ವೀಕರಿಸುತ್ತೇವೆ. ಕೇಂದ್ರ ಸರಕಾರವು ಎನ್‌ಸಿಎಫ್ ರಚಿಸಿದ ಅನಂತರ ರಾಜ್ಯ ದಲ್ಲಿ ಕೆಸಿಎಫ್ ರಚಿಸಿ ಪಠ್ಯಪುಸ್ತಕ ಸಿದ್ಧಗೊಳಿಸಲಾಗುತ್ತದೆ.

ನಮ್ಮ ಕೊಡುಗೆ ಅಪಾರ :

ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವಿಜ್ಞಾನವಿದೆ. ಆದರೆ ನಮ್ಮನ್ನು ಈವರೆಗೆ ಭಾರತೀಯ ಶಾಸ್ತ್ರೀಯ ವಿಜ್ಞಾನವು ತಿಳಿಯದಂತೆ ಬೆಳೆಸಿದ್ದಾರೆ. ನಮ್ಮ ಇತಿಹಾಸ, ತತ್ತ್ವ ಶಾಸ್ತ್ರಗಳನ್ನು ತಿಳಿದರೆ ಪ್ರಪಂಚದ ಜ್ಞಾನ ವ್ಯವಸ್ಥೆಗೆ ಭಾರತದ ಕೊಡುಗೆ ಏನು ಮತ್ತು ಅದರ ಪ್ರಯೋಜನ ಏನು ಎಂಬುದು ಸ್ಪಷ್ಟವಾಗುತ್ತದೆ.

ನ್ಯೂಟನ್‌ ಸಿದ್ಧಾಂತ ತಪ್ಪಲ್ಲ:

Advertisement

ನ್ಯೂಟನ್‌ ಸಿದ್ಧಾಂತ ತಪ್ಪು ಎಂದು ನಾವು ಹೇಳಿಲ್ಲ. ಅವನ ಗುರುತ್ವಾಕರ್ಷಣೆ ಸಿದ್ಧಾಂತ ವನ್ನು ಕೇರಳದ ಪುಸ್ತಕ ವೊಂದರಿಂದ ನಕಲು ಮಾಡ ಲಾಗಿದೆ ಎಂಬ ವಿಷಯ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಚರ್ಚೆಯಾಗುತ್ತಿದೆ. ಅದನ್ನು ಹೇಳಿದ್ದೇವೆ.

ಪೈಥಾಗೊರಸ್‌ ಪ್ರಮೇಯವೂ ನಮ್ಮ ಕೊಡುಗೆ :

ಪೈಥಾಗೊರಸ್‌ ಪ್ರಮೇಯ ಎರವಲು ಪಡೆದದ್ದು ಎಂದು ಹತ್ತಾರು ವರ್ಷಗಳಿಂದ ಚರ್ಚೆಯಾಗುತ್ತಿದೆ. ಈ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಲಾಗಿದೆ. ಸನಾತನ ಭಾರತದ ಗಣಿತಜ್ಞ ಬೌದ್ಧಾಯನ ಈ ಪ್ರಮೇಯ ಮಂಡಿಸಿದ್ದ. ಪೈಥಾಗೊರಸ್‌ ಪ್ರಮೇಯದ ಮೂಲ ಭಾರತದ ಕೊಡುಗೆ ಎಂಬುದನ್ನು ತಿಳಿಸಿದ್ದೇವೆ.

ಶಿಕ್ಷಣದ ಭಾರತೀಕರಣ :

ಶಾಲಾ ಶಿಕ್ಷಣ ಮತ್ತು ಪುಸ್ತಕವನ್ನು ಕೇಸರೀಕರಣ ಮಾಡುತ್ತಿಲ್ಲ. ಬದಲಾಗಿ ಭಾರತೀಕರಣ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಹತ್ತಾರು ರೀತಿಯಲ್ಲಿ ನಮ್ಮನ್ನು ಕೀಳಾಗಿ ನೋಡುವ ಮನಃಸ್ಥಿತಿ ಬೆಳೆದು ಬಂದಿದೆ. ಆದರೆ ಮ್ಯಾಕ್ಸ್‌ಮುಲ್ಲರ್‌ ತನ್ನ “ದಿ ಗ್ರೇಟ್‌ ಫಿಲಾಸಫಿ’ ಎಂಬ ಗ್ರಂಥದ 12 ಸಂಪುಟಗಳಲ್ಲಿಯೂ ಜ್ಞಾನ-ವಿಜ್ಞಾನದಲ್ಲಿ ಭಾರತದ ಪಾತ್ರವೇನೆಂದು ತಿಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ತಿಳಿದು ನಮ್ಮ ಪಠ್ಯದಲ್ಲಿ ವಿಜ್ಞಾನ, ಗಣಿತ, ತತ್ತÌಶಾಸ್ತ್ರ, ಯೋಗದಲ್ಲಿ ಭಾರತೀಯರ ಆಳವಾದ ಜ್ಞಾನಭಂಡಾರವನ್ನು ತಿಳಿಸಲಾಗುತ್ತಿದೆ.

800 ಪೊಸಿಷನ್‌ ಪೇಪರ್‌ :

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಒಪ್ಪಿಗೆ ನೀಡಿರುವ ವಿವಿಧ ರಾಜ್ಯಗಳು ಕೇಂದ್ರ ಸರಕಾರಕ್ಕೆ ಒಟ್ಟು  800 “ಪೊಸಿಷನ್‌ ಪೇಪರ್‌’ಗಳನ್ನು ಸಲ್ಲಿಸಿವೆ. ಕರ್ನಾಟಕದಿಂದಲೂ ಕಾರ್ಯಪಡೆ 26 ಪೇಪರ್‌ಗಳನ್ನು ಸಲ್ಲಿಸಿದೆ. ಇವುಗಳನ್ನು ಅಧ್ಯಯನ ಮಾಡಿದ ಬಳಿಕ ಕೇಂದ್ರ ಸರಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ.

- ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next