Advertisement

ಅಧ್ಯಕ್ಷ ಸ್ಥಾನ ತೆರವು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

07:15 AM Jun 23, 2018 | Team Udayavani |

ಬೆಂಗಳೂರು: ಅವಧಿ ಪೂರ್ಣಗೊಳ್ಳುವ ಮುನ್ನವೇ ಅಧ್ಯಕ್ಷ ಸ್ಥಾನ ತೆರವುಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿ ನಾಲ್ವರು ನಿಗಮ ಮಂಡಳಿಗಳ ನಿಕಟಪೂರ್ವ ಅಧ್ಯಕ್ಷರು ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ. 

Advertisement

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಅಯೋಗದ ಅಧ್ಯಕ್ಷರಾಗಿದ್ದ ಎ.ಮುನಿಯಪ್ಪ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌ ವೆಂಕಟೇಶ್‌, ಡಾ.ಬಾಬುಜಗಜೀವನ್‌ ರಾಂ ಚರ್ಮ ಮತ್ತು ಕೈಗಾರಿಕೆ ಅಭಿವೃದಿಟಛಿ ನಿಗಮದ ಓ ಶಂಕರ್‌, ಅಂಬಿಗರ ಚೌಡಯ್ಯ ನಿಗಮದ ಜಗನ್ನಾಥ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತಾದ ಪ್ರತ್ಯೇಕ ರಿಟ್‌ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ,ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತು.

ನಿಗಮ-ಮಂಡಳಿಗಳು ಹಾಗೂ ಆಯೋಗದ ಅಧ್ಯಕ್ಷ ಸ್ಥಾನ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಮೇ 28ರಂದು ಆದೇಶ ಹೊರಡಿಸಿದೆ.

ಆದರೆ, ಅಧಿಕಾರಾವಧಿ ಪೂರ್ಣಗೊಳ್ಳದೆ ಈ ಆದೇಶ ಹೊರಡಿಸಿರುವುದು ಸಂವಿಧಾನದ 14 ಹಾಗೂ 21ನೇ
ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next