Advertisement

ಸಿಬ್ಬಂದಿ ಬ್ಯಾಗ್‌ ಮೇಲೆ ನಾಯಕರ ಚಿತ್

02:55 PM Apr 23, 2019 | Team Udayavani |

ಕೊಪ್ಪಳ: ನಗರದ ಗವಿಸಿದ್ದೇಶ್ವರ ಶಾಲಾ ಆವರಣದಲ್ಲಿ ಚುನಾವಣಾ ಸಿಬ್ಬಂದಿಗೆ ಮತಯಂತ್ರ ಸೇರಿದಂತೆ ಇತರೆ ಸಾಮಗ್ರಿಗಳನ್ನು ನೀಡಲು ಜಿಲ್ಲಾಡಳಿತ ಆಹ್ವಾನಿಸಿತ್ತು. ಕೆಲವು ಸಿಬ್ಬಂದಿ ಮತಗಟ್ಟೆಯಲ್ಲಿ ವಸತಿ ಮಾಡಲು ಬ್ಯಾಗ್‌ನೊಂದಿಗೆ ಆಗಮಿಸಿದ್ದರು. ಆದರೆ ಆ ಬ್ಯಾಗ್‌ಗಳ ಮೇಲೆ ಬಿಜೆಪಿ, ಕಾಂಗ್ರೆಸ್‌ ನಾಯಕರ ಭಾವಚಿತ್ರ ಇರುವುದು ಎಲ್ಲರ ಗಮನ ಸೆಳೆಯಿತು.

Advertisement

ಕೆಲವರ ಬ್ಯಾಗ್‌ಗಳ ಮೇಲೆ ಕುಷ್ಟಗಿ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಭಾವಚಿತ್ರ ಇದ್ದರೆ, ಕೆಲವರ ಬ್ಯಾಗ್‌ಗಳ ಮೇಲೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ ಅವರ ಭಾವಚಿತ್ರಗಳಿರುವ ಕುರಿತು ಗಮನ ಸೆಳೆದವು. ಇವು ಮತಗಟ್ಟೆಯಲ್ಲಿ ಮತದಾರನ ಮೇಲೆ ಪ್ರಭಾವ ಬೀರುವ ಸಾಧ್ಯತೆಯ ಕುರಿತು ಚರ್ಚೆ ನಡೆಯುತ್ತಿದ್ದಂತೆ, ಇದೊಂದು ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವ ಕುರಿತು ಜಿಲ್ಲಾಧಿಕಾರಿ ಸುನೀಲ್ ಕುಮಾರ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next