Advertisement

ಕುಂಬಳೆ: ಪ್ರಯಾಣಿಕರ ಸರ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧನ

09:33 PM May 19, 2022 | Team Udayavani |

ಕುಂಬಳೆ: ಬಸ್‌ ಪ್ರಯಾಣಿಕರ ಸರ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರ‌ನ್ನು ಪಾನೂರು ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡಿನ  ಮಧುರೈ ನಿವಾಸಿಗಳಾದ ಈಶ್ವರಿ (38) ಮತ್ತು ಮುರುಗೇಶ್ವರಿ (42) ಬಂಧಿತರು.

ಅವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಾಧು (73)ಅವರ ಬಳಿ ಕುಳಿತು ಸರ ಕಟ್ಟರ್‌ ಬಳಸಿ ಕುತ್ತಿಗೆಯಿಂದ ಚಿನ್ನದ ಸರ ತುಂಡರಿಸಿದಾಗ ಮಹಿಳೆ ಬೊಬ್ಬೆ ಹೊಡೆದಿದ್ದಾರೆ. ಕಳ್ಳರು ಬಸ್‌ ಇಳಿದು ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತರು ವಿವಿಧೆಡೆಗಳಲ್ಲಿ ಸರ ಅಪಹರಿಸಿದ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು ಇವರ ತಂಡದಲ್ಲಿ ಇನ್ನೂ ಹಲವರು ಒಳಪಟ್ಟಿರುವುದಾಗಿ ಶಂಕೆಯಲ್ಲಿ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next