Advertisement

ಬಸ್ ನಿಲ್ದಾಣದಲ್ಲಿ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ

10:15 AM Sep 03, 2021 | Team Udayavani |

ವಿಜಯಪುರ: ನಿಲ್ದಾಣದಲ್ಲಿ ಬಸ್ ಗಾಗಿ ಕಾಯಿತ್ತ ಕುಳಿತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಜಿಲ್ಲೆಯಲ್ಲಿ ಜರುಗಿದೆ.  ಮಾಂಗಲ್ಯ ಕಳ್ಳತನದ ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.

Advertisement

ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೆಪ್ಟೆಂಬರ್ 1 ರಂದು ಘಟನೆ ನಡೆದಿದೆ.

ರೇಣುಕಾ ಪಾಟೀಲ ಎಂಬುವವರ 38 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನೋರ್ವ ಎಗರಿಸಿದ್ದಾನೆ. ತಾಳಿಕೋಟೆ ಪಟ್ಟಣದಿಂದ ಯಾದಗಿರಿ ಜಿಲ್ಲೆಯ ದೋರಹಳ್ಳಿಗೆ ತೆರಳಲು ರೇಣುಕಾ ಬಸ್ ಗಾಗಿ ಕಾಯುತ್ತಿದ್ದರು.

ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: 533 ಮತಗಟ್ಟೆಗಳಲ್ಲಿ ಮತದಾನ ಶುರು

ಈ ವೇಳೆ ನಿಲ್ದಾಣದಲ್ಲಿ ಮಹಿಳೆ ಪಕ್ಕದಲ್ಲೇ ಹೊಂಚು ಹಾಕಿ ನಿಂತಿದ್ದ ಕಳ್ಳ, ಮಾಂಗಲ್ಯ ಸರ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ದೃಶ್ಯ ನಿಲ್ದಾಣದಲ್ಲಿಯ ಸಿ.ಸಿ. ಕೆಮೆರಾದಲ್ಲಿ ಸೆರೆಯಾಗಿದೆ.

Advertisement

ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next