Advertisement

“ಸಿಜಿಕೆ’ರಂಗ ಹಬ್ಬ

08:51 PM Oct 11, 2019 | Lakshmi GovindaRaju |

ರಂಗ ನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ, ಐದು ದಿನಗಳ ಕಾಲ ರಂಗೋತ್ಸವ ನಡೆಯಲಿದ್ದು, ಬಹುಭಾಷಾ ನಾಟಕಗಳು ಹಾಗೂ ಗಿರೀಶ್‌ ಕಾರ್ನಾಡ್‌ ಸ್ಮರಣಾರ್ಥ ಕನ್ನಡದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ, ಹಾಡು- ಹರಟೆ, ದೇಸಿ ತಿಂಡಿ, ಕೈಮಗ್ಗ ಉಡುಪುಗಳು ಮತ್ತು ಗುಡಿ ಕೈಗಾರಿಕೆ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

Advertisement

ಉತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕ-ಕಿರುಚಿತ್ರಗಳ ವಿವರ
ಅ.13, ಭಾನುವಾರ ಸಂಜೆ 5.45- ಅಕ್ಷರದವ್ವನ ಕಥೆ (ಸಾವಿತ್ರಿಬಾಯಿ ಫ‌ುಲೆ ಕುರಿತ ರಂಗ ಪ್ರಯೋಗ), ರಚನೆ: ರಾಜೇಶ್ವರಿ ಧಾರವಾಡ.
ಅ.13, ಭಾನುವಾರ ಸಂಜೆ 6.30- ಉದ್ಘಾಟನಾ ಸಮಾರಂಭ.

(ಗಿರೀಶ್‌ ಕಾರ್ನಾಡ್‌ ವೇದಿಕೆ- ಕಿರುಚಿತ್ರ)
ಅ.14, ಸೋಮವಾರ ಸಂಜೆ 4.30-ಬೆನ್ನಿಗೆಲ್ಲಿಯ ಕಣ್ಣು, ನಿರ್ದೇಶನ- ನರೇಶ್‌ ಹೆಗಡೆ ದೊಡ್ಮರಿ
ಅ.15, ಮಂಗಳವಾರ ಸಂಜೆ 4.30-ಭೂತ ಮಿಸ್ಸಿಂಗ್‌, ನಿರ್ದೇಶನ- ಶಶಾಂಕ ಸೋಗಾಲ
ಅ.16-ಬುಧವಾರ ಸಂಜೆ 4.30-ನಾನ್‌ ದೇವ್ರು, ನಿರ್ದೇಶನ-ಉತ್ಕರ್ಷ ಬಲರಾಮ್‌ ಮತ್ತು ಬಿಡುಗಡೆ, ನಿರ್ದೇಶನ- ನವೀನ್‌ ತೇಜಸ್ವಿ.
ಅ.17-ಗುರುವಾರ ಸಂಜೆ 4.30- ಜಿ.ಪಿ.ಎಸ್‌., ನಿರ್ದೇಶನ- ರಘುನಂದನ್‌ ಕಾನಡ್ಕ

(ಅ.ನಾ.ರಮೇಶ್‌ ವೇದಿಕೆ- ನಾಟಕ)
ಅ.14, ಸೋಮವಾರ ಸಂಜೆ 5.15- ಮತ್ತೂಬ್ಬ ಮಾಯಿ- ರಚನೆ: ರಾಘವೇಂದ್ರ ಪಾಟೀಲ್‌, ತಂಡ: ಆಟ-ಮಾಟ
ಅ.15, ಮಂಗಳವಾರ ಸಂಜೆ 5.15-ಕಸ್ತೂರಬಾ- ರಚನೆ: ಎಸ್‌. ರಾಮನಾಥ, ಅಭಿನಯ: ಬಿ.ಎನ್‌. ಶಶಿಕಲಾ, ರಂಗಾಯಣ
ಅ.16, ಬುಧವಾರ ಸಂಜೆ 5.15- ದ್ವೀಪ- ರಚನೆ: ಅತುಲ್‌ ಫ್ಯೂಗಾರ್ಡ್‌, ತಂಡ: ಆಯನ ನಾಟಕದ ಮನೆ (ಮಂಗಳೂರು)
ಅ.17, ಗುರುವಾರ ಸಂಜೆ 5.15- ಊರ್ಮಿಳಾ- ರಚನೆ: ಎಚ್‌.ಎಸ್‌.ವೆಂಕಟೇಶ ಮೂರ್ತಿ- ತಂಡ: ಸ್ಪಂದನ ಮತ್ತು ಸೀತಾಂತರಾಳ- ರಚನೆ: ಶಶಿಕಾಂತ ಯಡಹಳ್ಳಿ, (ಮಂಜುಳಾ ಬದಾಮಿ ಅವರಿಂದ ಏಕವ್ಯಕ್ತಿ ಪ್ರದರ್ಶನ)

(ಡಿ.ಕೆ. ಚೌಟ ವೇದಿಕೆ, ಬಹುಭಾಷಾ ನಾಟಕ)
ಅ.13, ಭಾನುವಾರ ಸಂಜೆ 7- ಪುಳುದಿ ಮರಪರವೈಗಳ್‌ (ತಮಿಳು)- ರಚನೆ: ಮುರುಗ ಭೂಪತಿ-ತಂಡ: ಮನಳ್‌ಮಾಗುಡಿ ಥಿಯೇಟರ್‌ ಲ್ಯಾಂಡ್‌
ಅ.14, ಸೋಮವಾರ ಸಂಜೆ 7- ಕನ್ನಗತ್ತಿ (ಕನ್ನಡ)-ರಚನೆ: ಲಕ್ಷ್ಮೀಪತಿ ಕೋಲಾರ- ತಂಡ: ರಂಗನಿರಂತರ
ಅ.15, ಮಂಗಳವಾರ ಸಂಜೆ 7- ಸಂಗೀತ್‌ ದೇವಬಜಾಲಿ (ಮರಾಠಿ)- ರಚನೆ- ಪ್ರಾಜಕ್‌¤ ದೇಶಮುಖ್‌- ತಂಡ: ಭದ್ರಕಾಳಿ ಪ್ರೊಡಕ್ಷನ್ಸ್‌, ಮುಂಬಯಿ
ಅ.16, ಬುಧವಾರ ಸಂಜೆ 7- ಪರೆಯಾನ್‌ ಮರನ್ನ ಕಥೆಗಳ್‌ (ಮಲಯಾಳಂ)- ರಚನೆ- ಶ್ರೀಜಿತ್‌ ಸುಂದರಂ- ತಂಡ: ಧ್ವಯ, ಎರ್ನಾಕುಲಂ
ಅ.17, ಗುರುವಾರ ಸಂಜೆ 7-ಘರೇ ಫಿರಾರ್‌ ಗಾನ್‌ (ಬಂಗಾಳಿ)- ರಚನೆ: ಪ್ರೊಬಿರ್‌ ಗುಹಾ- ತಂಡ: ಆಲ್ಟರ್‌ನೆàಟಿವ್‌ ಲಿವಿಂಗ್‌ ಥಿಯೇಟರ್‌

Advertisement

ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಯಾವಾಗ?: ಅ.13-17, ಪ್ರತಿದಿನ ಸಂಜೆ 4ರಿಂದ

Advertisement

Udayavani is now on Telegram. Click here to join our channel and stay updated with the latest news.

Next