Advertisement
ನಿರ್ದೇಶಕ ವಿನಯ್ ಕೃಷ್ಣ ಕಾರು ಸೀಜ್ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. “ಚಿತ್ರದ ಕಥೆ ತುಂಬಾ ವಿಭಿನ್ನವಾಗಿದೆ. ಈ ತರಹದ ಸಬೆjಕ್ಟ್ ಎಲ್ಲೂ ಬಂದಿಲ್ಲ. ಹಾಗಾಗಿ, ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ಆರಂಭದಲ್ಲಿ ಚಿಕ್ಕದಾಗಿಆರಂಭಗೊಂಡ ಈ ಸಿನಿಮಾದಲ್ಲಿ ನಂತರ ದೊಡ್ಡ ದೊಡ್ಡ ನಟರು ಸೇರಿಕೊಂಡರು.
ಹೀಗಾದರೆ ನಾವೇನು ಮಾಡೋಕ್ಕಾಗುತ್ತೆ. ಚಿತ್ರದ ಪ್ರಮೋಶನ್ಗೆ ಪ್ರತಿ ಬಾರಿಯೂ ಕರೆಯುತ್ತಲೇ ಇದ್ದೇವೆ. ಆರಂಭದಲ್ಲಿ ಏನೇನೋ ಬೇರೆ ಕಾರಣ ಹೇಳುತ್ತಿದ್ದ ಪಾರುಲ್, ಈಗ ಚಿತ್ರತಂಡದವರು ಸಂಭಾವನೆ ಬಾಕಿ ಉಳಿಸಿಕೊಂಡಿದ್ದಾರೆನ್ನುತ್ತಾ ಪ್ರಚಾರದಿಂದ ದೂರ
ಉಳಿಯುತ್ತಿದ್ದಾರೆ’ ಎಂಬುದು ವಿನಯ್ ಕೃಷ್ಣ ಮಾತು. ನಿರ್ಮಾಪಕ ತ್ರಿವಿಕ್ರಮ ಅವರಿಗೆ “ಪರಿ’ ನಂತರ ಒಳ್ಳೆಯ ಸಿನಿಮಾವೊಂದನ್ನು ಮಾಡಬೇಕೆಂದು ಕಥೆಗಾಗಿ ಹುಡುಕುತ್ತಿದ್ದರಂತೆ. ಆಗ ಸಿಕ್ಕಿದ್ದೇ “ಸೀಜರ್’. “ಕನ್ನಡ ಚಿತ್ರರಂಗದಲ್ಲಿ ಒಂದು ಗುಣಮಟ್ಟದ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದು “ಸೀಜರ್’ ಮೂಲಕ ಈಡೇರಿದೆ. ಸೌಂಡಿಂಗ್ನಿಂದ ಹಿಡಿದು ಯಾವ ವಿಚಾರದಲ್ಲೂ ನಾವು ರಾಜಿಯಾಗಿಲ್ಲ’ ಎನ್ನುವುದು ತ್ರಿವಿಕ್ರಮ್ ಮಾತು. ಚಿತ್ರದಲ್ಲಿ ನಟಿಸಿರುವ ಚಿರುಗೆ “ಸೀಜರ್’ ಚಿತ್ರದ ಪಾತ್ರ ತುಂಬಾ ಹೊಸದಾಗಿದೆಯಂತೆ. ಮೊದಲ ಬಾರಿಗೆ ನೆಗೆಟಿವ್ ಶೇಡ್ನಲ್ಲಿ ನಟಿಸಿರುವ ಅವರಿಗೆ ಈ ಚಿತ್ರ ಹೊಸ ಇಮೇಜ್ ಕೊಡುವ ವಿಶ್ವಾಸವಿದೆ. “ಸಿನಿಮಾ ನೋಡಿದಾಗ ನಮಗೆ ಈ ಚಿತ್ರದ ಬಗ್ಗೆ ವಿಶ್ವಾಸ ಬಂದು ಇತರ ಭಾಷೆಗೂ ನಾವೇ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ರಿವೆಂಜ್ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ’
ಎಂಬುದು ಚಿರು ಮಾತು. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು, ಚಿತ್ರದ ಹಾಡುಗಳ ಹಾಗೂ ಹಿನ್ನೆಲೆ ಸಂಗೀತದ ಬಗ್ಗೆ ಮಾತನಾಡಿದರು.